ಪುರುಷ ಸಿಂಗಲ್ಸ್ ವಿಭಾಗದ ನಾಲ್ಕರ ಘಟ್ಟದ ಪಂದ್ಯದಲ್ಲಿ ವೀರಸಾಮಿ 6-3, 6-0ರಿಂದ ಮೂರನೇ ಶ್ರೇಯಾಂಕದ ತಮಿಳುನಾಡು ಆಟಗಾರ ಕರುಣಾಕರನ್ ಕಾರ್ತಿಕ್ ಸವಾಲು ಮೀರಿದರು. ಪ್ರಶಸ್ತಿಗಾಗಿ ಅವರು ನಾಲ್ಕನೇ ಶ್ರೇಯಾಂಕದ, ತಮಿಳುನಾಡಿನ ಸುಬ್ರಮಣ್ಯನ್ ಬಾಲಚಂದ್ರ ಅವರೊಂದಿಗೆ ಸೆಣಸಲಿದ್ದಾರೆ. ಮತ್ತೊಂದು ಸೆಮಿಫೈನಲ್ನಲ್ಲಿ ಸುಬ್ರಮಣ್ಯನ್ 6-1, 6-2ರಿಂದ ತಮ್ಮದೇ ರಾಜ್ಯದ ದುರೈ ಮರಿಯಪ್ಪನ್ ಅವರನ್ನು ಮಣಿಸಿದರು.