ಬೆಂಗಾಲ್ ವಾರಿಯರ್ಸ್ ಎದುರಿನ ಹಿಂದಿನ ಪಂದ್ಯದಲ್ಲಿ ಪುಣೇರಿ ತಂಡ ದಿಟ್ಟ ಸಾಮರ್ಥ್ಯ ತೋರಿತ್ತು. ಕೇವಲ ಮೂರು ಪಾಯಿಂಟ್ಸ್ಗಳಿಂದ ಸೋತಿತ್ತು. ಪ್ರಮುಖ ರೇಡರ್ ನಿತಿನ್ ತೋಮರ್ ಅನುಪಸ್ಥಿತಿ ಈ ತಂಡಕ್ಕೆ ಕಾಡುತ್ತಿದೆ. ಮಂಜೀತ್ ಮತ್ತು ಪಂಕಜ್ ಮೋಹಿತೆ ಉತ್ತಮ ಲಯದಲ್ಲಿರುವುದು ನಾಯಕ ಸುರ್ಜೀತ್ ಅವರ ಸಮಾಧಾನಕ್ಕೆ ಕಾರಣವಾಗಿದೆ. ಬೆಂಗಾಲ್ ಎದುರಿನ ಹಣಾಹಣಿಯಲ್ಲಿ ಇವರು ಸೂಪರ್–10 ಸಾಧನೆ ಮಾಡಿದ್ದರು.