ಪ್ರಥಮಾರ್ಧದಲ್ಲಿ ಬೆಂಗಳೂರು ತಂಡವು 27–11ರಿಂದ ದೊಡ್ಡ ಅಂತರ ಸಾಧಿಸಿತ್ತು. ಆದರೆ ವಿರಾಮದ ನಂತರ ಹರಿಯಾಣ ಆಟಗಾರರು ದಿಟ್ಟ ತಿರುಗೇಟು ನೀಡಿದರು. ಇದರಿಂದಾಗಿ ಪಂದ್ಯವು ಕುತೂಹಲ ಕೆರಳಿಸಿತು. ಈ ಅವಧಿಯಲ್ಲಿ ಬೆಂಗಳೂರು 9–22ರಿಂದ ಭಾರಿ ಹಿನ್ನಡೆ ಅನುಭವಿಸಬೇಕಾಯಿತು. ಆದರೆ ಪಂದ್ಯ ಮುಗಿದಾಗ ಬೆಂಗಳೂರು ತಂಡವು ಮೂರು ಪಾಯಿಂಟ್ಗಳ ಅಂತರದಿಂದ ಜಯಿಸಿ ನಿಟ್ಟುಸಿರು ಬಿಟ್ಟಿತು. ಹರಿಯಾಣ ತಂಡದ ಮೀತು ಶರ್ಮಾ (10) ಹಾಗೂ ಮಂಜೀತ್ (8) ಮಿಂಚಿದರು.