ಯು.ಪಿ.ಯೋಧಾ ಈಗ ಪಾಯಿಂಟ್ ಪಟ್ಟಿಯ ಕೊನೆಯ ಸ್ಥಾನದಲ್ಲಿದೆ. ಮೋನು ಗೋಯತ್ ಮತ್ತು ಶ್ರೀಕಾಂತ್ ಜಾಧವ್ ಅವರಂಥ ಪ್ರಭಾವಿ ಆಟಗಾರರನ್ನು ಹೊಂದಿರುವ ತಂಡದ ಡಿಫೆನ್ಸ್ ವಿಭಾಗದಲ್ಲಿ ನಾಯಕ ನಿತೇಶ್ ಕುಮಾರ್ ತ್ರಿಮೂರ್ತಿಗಳಾದ ಸುಮಿತ್, ಅಮಿತ್ ಮತ್ತು ನರೇಂದರ್ ಇದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಆಡದೇ ಇದ್ದ ರಿಷಾಂಕ್ ದೇವಾಡಿಗ ಈ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.