ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ‍್ಯಾಲಿ: ಕನ್ನಡಿಗ ನಟರಾಜ್‌ಗೆ ಪ್ರಶಸ್ತಿ

Last Updated 13 ಅಕ್ಟೋಬರ್ 2018, 15:27 IST
ಅಕ್ಷರ ಗಾತ್ರ

ಲೆಹ್‌ : ಕರ್ನಾಟಕದ ಮೋಟರ್‌ ಬೈಕ್‌ ಸಾಹಸಿ ಆರ್‌.ನಟರಾಜ್‌ ಅವರು ರೇಡ್‌ ಡಿ ಹಿಮಾಲಯ ರ‍್ಯಾಲಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಟಿವಿಎಸ್‌ ರೇಸಿಂಗ್‌ ತಂಡದ ನಟರಾಜ್‌, ಮೋಟೊ ಎಕ್ಸ್‌ಟ್ರೀಮ್‌ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.

ನಾಲ್ಕು ದಿನಗಳ ಕಾಲ ನಡೆದ ರ‍್ಯಾಲಿಯಲ್ಲಿ ಬೆಂಗಳೂರಿನ ನಟರಾಜ್‌ ಒಟ್ಟು 4 ಗಂಟೆ 58 ನಿಮಿಷ 52 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿದರು. ಮೈ ಕೊರೆಯುವ ಚಳಿಯ ನಡುವೆಯೂ ಕಡಿದಾದ ಮತ್ತು ದುರ್ಗಮ ರಸ್ತೆಗಳಲ್ಲಿ ಅವರು ಅಮೋಘ ಚಾಲನ ಕೌಶಲ ಮೆರೆದರು.

ಅಕ್ಟೋಬರ್‌ 10ರಂದು ಕಾರ್ಗಿಲ್‌ನಲ್ಲಿ ಶುರುವಾಗಿದ್ದ ರ‍್ಯಾಲಿ ಜಾನ್ಸಕರ್‌ ಮತ್ತು ಲಡಾಕ್‌ ಮಾರ್ಗವಾಗಿ ಸಾಗಿತ್ತು.

ಟಿವಿಎಸ್‌ ತಂಡದ ಮತ್ತೊಬ್ಬ ಚಾಲಕ ಇಮ್ರಾನ್‌ ಪಾಶಾ ಎರಡನೇ ಸ್ಥಾನ ಗಳಿಸಿದರು. ಅವರು ನಿಗದಿತ ದೂರ ಕ್ರಮಿಸಲು ಒಟ್ಟು 5 ಗಂಟೆ 15 ನಿಮಿಷ 21 ಸೆಕೆಂಡು ತೆಗೆದುಕೊಂಡರು. ಎಸ್‌.ಡಿ.ವಿಶ್ವಾಸ್‌ ಮತ್ತು ಜತಿನ್‌ ಜೈನ್‌ ಅವರು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದರು.

ಪೊಲಾರಿಸ್‌ ತಂಡದ ಅರಿಂದಮ್‌ ಸೈಕಿಯಾ ಅವರು ಎಕ್ಸ್‌ಟ್ರೀಮ್‌ 4X4 ವಿಭಾಗದಲ್ಲಿ ಚಾಂಪಿಯನ್‌ ಆದರು. ಅವರು ಒಟ್ಟು 6 ಗಂಟೆ 32 ನಿಮಿಷ 49 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು.

2015ರಲ್ಲಿ ಪ್ರಶಸ್ತಿ ಗೆದ್ದಿದ್ದ ಎ.ವಿ.ಎಸ್‌. ಗಿಲ್‌ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ಹ್ಯಾರಿ ರ‍್ಯಾಲಿ ತಂಡದ ಹಿಮಾಂಶು ಅರೋರಾ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT