ಕ್ರೀಡಾಂಗಣದಲ್ಲಿ ಕೈಗೊಂಡಿರುವ ಕಾಮಗಾರಿ ಬಗ್ಗೆ ಸ್ಪಷ್ಟನೆ ನೀಡಿರುವ ಡಿವೈಇಎಸ್ ಜಂಟಿ ನಿರ್ದೇಶಕ ಎಂ.ಎಸ್.ರಮೇಶ್, ‘ಫುಟ್ಬಾಲ್ ಪಂದ್ಯಕ್ಕಾಗಿ ಹುಲ್ಲಿನ ಅಂಕಣ ಸಜ್ಜುಗೊಳಿಸುವ ಕೆಲಸ ನಡೆಯುತ್ತಿಲ್ಲ. ಈಗ ಕೈಗೊಂಡಿರುವುದು ನಿಯಮಿತ ನಿರ್ವಹಣಾ ಕೆಲಸ ಮಾತ್ರ. ಈ ಕಾಮಗಾರಿ ಇನ್ನೂ 15 ದಿನ ಮುಂದುವರಿಯಲಿದೆ’ ಎಂದಿದ್ದಾರೆ.