ಮೈಸೂರು: ಬೆಳಗಾವಿ ವಲಯದ ಶಿವಯ್ಯ ಪೂಜಾರಿ ಮತ್ತು ಬೆಂಗಳೂರು ಗ್ರಾಮಾಂತರ ವಿಭಾಗದ ಮಧುಸೂದನ್ ಅವರು ದಸರಾ ಅಂಗವಾಗಿ ಆಯೋಜಿಸಿರುವ ರಾಜ್ಯಮಟ್ಟದ ಗ್ರೀಕೊ ರೋಮನ್ ಕುಸ್ತಿ ಸ್ಪರ್ಧೆಯಲ್ಲಿ ಕ್ರಮವಾಗಿ 97 ಕೆ.ಜಿ. ಮತ್ತು 87 ಕೆ.ಜಿ. ವಿಭಾಗಗಳಲ್ಲಿ ಅಗ್ರಸ್ಥಾನ ಪಡೆದುಕೊಂಡರು.
ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸ್ಪರ್ಧೆಯಲ್ಲಿ ಶಿವಯ್ಯ ಅವರು ಬೆಂಗಳೂರು ಗ್ರಾಮಾಂತರ ವಿಭಾಗದ ಎನ್.ಕೆಂಚಪ್ಪ ವಿರುದ್ಧ ಗೆದ್ದರು.
ಫಲಿತಾಂಶ ಹೀಗಿದೆ: 55 ಕೆ.ಜಿ. ವಿಭಾಗ: ಎಸ್.ಪ್ರತೀಕ್ (ಬೆಂಗಳೂರು ಗ್ರಾಮಾಂತರ ವಿಭಾಗ)–1, ರೂಪೇಶ್ ಕೆ. (ಬೆಳಗಾವಿ ವಿಭಾಗ)–2, ಅಜಿತ್ ಆರ್.ಚೌಗುಲೆ (ಬೆಳಗಾವಿ ವಿಭಾಗ)–3.
60 ಕೆ.ಜಿ. ವಿಭಾಗ: ಪ್ರಭಾಕರ್ ಎಂ. (ಬೆಂಗಳೂರು ಗ್ರಾಮಾಂತರ)–1, ಶಿವಪ್ಪ ಜಂಬಗಿ (ಬೆಳಗಾವಿ)–2, ರಾಮಣ್ಣ ಕೆ. (ಬೆಳಗಾವಿ)–3.