‘ವಂಚನೆ ಆರೋಪ ಮಾಡಿರುವ ಟಿ.ಜೆ. ಅಬ್ರಹಾಂ ಅವರ ವಿರುದ್ಧ ಪ್ರಕರಣ ದಾಖಲಿಸುವುದು ನಿಶ್ಚಿತ. ಆದರೆ ಅವರ ಬಗ್ಗೆ ಕೆಲವೊಂದು ದಾಖಲೆಗಳನ್ನು ದೆಹಲಿಯಿಂದ ಪಡೆದುಕೊಳ್ಳಬೇಕಿದ್ದು, ಅದಕ್ಕಾಗಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದೇನೆ. ವಿನಾಕಾರಣ ಸಮಯ ಹಾಳು ಮಾಡಿದ ಕಾರಣ ಸುಪ್ರೀಂ ಕೋರ್ಟ್ ಅವರಿಗೆ ₹25 ಲಕ್ಷ ದಂಡ ವಿಧಿಸಿತ್ತು. ಬೆಂಗಳೂರಿನ ನ್ಯಾಯಾಲಯ ಅವರಿಗೆ ಜೈಲು ಶಿಕ್ಷೆ ವಿಧಿಸಿತ್ತು. ಅಂತಹ ವ್ಯಕ್ತಿಯ ವಿಶ್ವಾಸಾರ್ಹತೆ ಎಷ್ಟಿರಬಹುದು ನೀವೇ ಊಹಿಸಿ’ ಎಂದರು.