ನಗರದ ದೇವರ ಕಾಲೊನಿಯ ಪರಿಶಿಷ್ಟ ಪಂಗಡಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಎದುರು ವಾಹನಗಳೆಲ್ಲ ನಿಂತವು. ದಿಢೀರ್ ಅಧಿಕಾರಿಗಳ ತಂಡ ಬಂದಿರುವುದನ್ನು ಹಾಸ್ಟೆಲ್ ವಾರ್ಡನ್ ಹಾಗೂ ವಿದ್ಯಾರ್ಥಿನಿಯರು ನೋಡಿ ಅಚ್ಚರಿ ಆಗಬಹುದು ಎನ್ನುವ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದರೆ, ಹಾಸ್ಟೆಲ್ ಪ್ರವೇಶದ್ವಾರದಲ್ಲಿ ಅಂದವಾಗಿ ರಂಗೋಲಿ ಹಾಕಿ, ಉದುಬತ್ತಿ ಹಚ್ಚಿಟ್ಟು ಸ್ವಾಗತಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಧಿಕಾರಿಗಳಿಗೂ ಗೊತ್ತಿರದ ಸುಳಿವು ಹಾಸ್ಟೆಲ್ ವಾರ್ಡನ್ಗೆ ಹೇಗೆ ಗೊತ್ತಾಯಿತು ಎಂದು ಭೇಟಿಗೆ ಹೋದವರೆಲ್ಲ ಅಚ್ಚರಿ ಪಡುವಂತಾಯಿತು.