₹ 10 ಕೋಟಿ ವೆಚ್ಚ: ‘ದಕ್ಷಿಣದ ಅಯೋಧ್ಯೆ ಎಂದು ಹೆಸರಾಗಿರುವ ಕಾಚರಕನಹಳ್ಳಿಗೆ 2007ರಲ್ಲಿ ಬಂದಿದ್ದ ರಾಘವೇಂದ್ರ ಭಾರತಿ ಸ್ವಾಮೀಜಿಯ ಪ್ರೇರಣೆಯಂತೆ ಬೃಹತ್ ಏಕಶಿಲಾ ಹನುಮಾನ್ ವಿಗ್ರಹ ಪ್ರತಿಷ್ಠಾಪಿಸಲು ಮುಂದಾಗಿದ್ದೇವೆ. ವಿಗ್ರಹ ಪ್ರತಿಷ್ಠಾಪನೆ ಮುಕ್ತಾಯ ಹಂತ ತಲುಪುವ ವೇಳೆಗೆ ಸುಮಾರು ₹ 10 ಕೋಟಿ ವೆಚ್ಚವಾಗಲಿದೆ. ವಿಗ್ರಹ ಸಾಗಣೆಗೆ ₹ 3.50 ಕೋಟಿ ಖರ್ಚಾಗುತ್ತದೆ. ಕಾಚರಕನಹಳ್ಳಿಗೆ 86 ಕಿ.ಮೀ ದೂರವಿದ್ದು, ವಿಗ್ರಹ ಸಾಗಿಸಲು ತಾಂತ್ರಿಕರ ನೆರವು ಪಡೆಯಲಾಗುತ್ತದೆ’ ಎಂದು ತಿಳಿಸಿದರು.