ಸುಖೇಶ್ ಹೆಗ್ಡೆ ಅವರು ಇರುವ ತಲೈವಾಸ್ ಮತ್ತು ರಿಷಾಂಕ್ ದೇವಾಡಿಗ ಅವರ ನಾಯಕತ್ವದ ಯೋಧಾಸ್ ಪಂದ್ಯ ತೀವ್ರ ಕುತೂಹಲ ಕೆರಳಿಸಿತ್ತು. ಆದರೆ ಆರಂಭದಲ್ಲೇ ಆಧಿಪತ್ಯ ಸ್ಥಾಪಿಸಿದ ತಲೈವಾಸ್ ತಂಡ ಅಜಯ್ ಠಾಕೂರ್, ಜಸ್ವೀರ್ ಸಿಂಗ್ ಮತ್ತು ಸುಖೇಶ್ ಮೂಲಕ ಪಾಯಿಂಟ್ಗಳನ್ನು ಕಲೆ ಹಾಕಿತು. ಕನ್ನಡಿಗ ಪ್ರಶಾಂತ್ ಕುಮಾರ್ ರೈ ಯೋಧಾಸ್ ಪರ ಮಿಂಚಿದರು.