ವಿಜಯಪುರ: ಎರಡೂ ದಿನ ಪ್ರಾಬಲ್ಯ ಮೆರೆದ ವಿಜಯಪುರ ಕ್ರೀಡಾನಿಲಯದ ಸೈಕ್ಲಿಸ್ಟ್ಗಳು, ಗುರುವಾರ ಇಲ್ಲಿ ಮುಕ್ತಾಯವಾದ 12ನೇ ರಾಜ್ಯ ರಸ್ತೆ ಸೈಕ್ಲಿಂಗ್ ಚಾಂಪಿಯನ್ಷಿಪ್ನಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡರು.
ಈ ತಂಡ 42 ಅಂಕಗಳನ್ನು ಗಳಿಸಿದರೆ, 36 ಅಂಕ ಕಲೆಹಾಕಿದ ಬಾಗಲಕೋಟೆ ಜಿಲ್ಲೆ ತಂಡಕ್ಕೆ ರನ್ನರ್ಸ್ ಅಪ್ ಸ್ಥಾನ ಲಭಿಸಿತು. ನ. 25ರಿಂದ 28ರ ತನಕ ಹರಿಯಾಣದ ಕುರುಕ್ಷೇತ್ರದಲ್ಲಿ ಜರುಗುವ ರಾಷ್ಟ್ರೀಯ ರಸ್ತೆ ಸೈಕ್ಲಿಂಗ್ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸುವ ತಂಡವನ್ನು ಇಲ್ಲಿ ಆಯ್ಕೆ ಮಾಡಲಾಗುತ್ತಿದೆ.
ಎರಡನೇ ದಿನದ ಫಲಿತಾಂಶ: ಪುರುಷರ ಹಾಗೂ ಬಾಲಕರ ವಿಭಾಗ:
16 ವರ್ಷದೊಳಗಿನ 15 ಕಿ.ಮೀ ಮಾಸ್ಡ್ ಸ್ಟಾರ್ಟ್: ಚಿರಾಯುಷ್ ಪಟವರ್ಧನ (ಕಾಲ: 22:39.44ಸೆ.)–1, ಕೆ.ಸುರೇಶ ಬಾಬು (ಎರಡೂ ಚಂದರಗಿ ಕ್ರೀಡಾ ಶಾಲೆ; 22:40.30ಸೆ.)–2, ಹನಮಂತ ಮರನೂರ (ಗದಗ ಕ್ರೀಡಾ ನಿಲಯ; 22:44.15ಸೆ.)–3.
18 ವರ್ಷದೊಳಗಿನ 50 ಕಿ.ಮೀ ಮಾಸ್ಡ್ ಸ್ಟಾರ್ಟ್: ಮಲ್ಲಿಕಾರ್ಜುನ ಯಾದವಾಡ (ಬಾಗಲಕೋಟೆ ಜಿಲ್ಲೆ; 56:04.56ಸೆ.)–1, ಮಧು ಕಾಡಾಪುರ (56:25:40ಸೆ.)–2, ಲೋಕೇಶ (ಇಬ್ಬರೂ ಚಂದರಗಿ ಕ್ರೀಡಾ ಶಾಲೆ;56:45.60ಸೆ.)–3.