ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಯೂಟರ್‌ಗಳಿಂದ ಆಟಗಾರರ ದೃಷ್ಟಿಕೋನ ಬದಲು: ಆನಂದ್‌

Last Updated 23 ಮೇ 2020, 19:41 IST
ಅಕ್ಷರ ಗಾತ್ರ

ಮುಂಬೈ: ಕಂಪ್ಯೂಟರ್‌ಗಳ ಬೆಳವಣಿಗೆಯಿಂದಾಗಿ ಚೆಸ್‌ ಬಗ್ಗೆ ಆಟಗಾರರ ದೃಷ್ಟಿಕೋನ ಬದಲಾಗಿದೆ. ಬೋರ್ಡ್‌ ಮುಂದೆ ಇಬ್ಬರು ಆಟಗಾರರು ಇರುವ ವ್ಯವಸ್ಥೆ ಬಿಟ್ಟು ಬೇರೆಲ್ಲಾ ಬದಲಾಗಿದೆ ಎಂದು ಮಾಜಿ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಅಭಿಪ್ರಾಯಪಟ್ಟಿದ್ದಾರೆ.

ಚದುರಂಗದ ತಮ್ಮ ಪಯಣದ ಬಗ್ಗೆ ಮಾತನಾಡಿದ ಆನಂದ್‌ ‘ನಾನು ದಿಢೀರನೇ ಆಟಗಾರನಾಗಲಿಲ್ಲ. ಅದರ ಹಿಂದೆ ಶ್ರಮವಿತ್ತು. 1980ರ ದಶಕದಲ್ಲಿ ಕಲಿಯುತಿದ್ದ ರೀತಿಯನ್ನು ಈಗ ಯಾರೂ ಅನುಸರಿಸುವುದಿಲ್ಲ. ಕಂಪ್ಯೂಟರ್‌ಗಳು ಆಟಗಾರರ ಯೋಚನಾ ಲಹರಿಯನ್ನು ಬದಲಾಯಿಸಿವೆ. ಈಗ ಆಟಗಾರರು ಅಧ್ಯಯನ ಮಾಡಿಯೇ ಆಡಲು ಬರುತ್ತಾರೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT