ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃಂದಾವನ ನಿರ್ಮಾಣದ ನೆನಪು

ಶ್ರೀವ್ಯಾಸರಾಜ
Last Updated 23 ಜುಲೈ 2019, 1:21 IST
ಅಕ್ಷರ ಗಾತ್ರ

ಬೆಂಗಳೂರು: ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪ ತುಂಗಭದ್ರಾ ನದಿಯ ನಡುಗಡ್ಡೆಯ ‘ನವ ವೃಂದಾವನ’ ಕ್ಷೇತ್ರದಲ್ಲಿನ ವ್ಯಾಸರಾಯರ ಮೂಲ ವೃಂದಾವನ ಪುನರ್ ನಿರ್ಮಾಣಕ್ಕೆ ಜನರು ನೀಡಿದ ನೈತಿಕ ಬೆಂಬಲವೇ ಕಾರಣವಾಯಿತು ಎಂದುಸೋಸಲೆ ಶ್ರೀವ್ಯಾಸರಾಜ ಮಠದ ವಿದ್ಯಾಶ್ರೀಶತೀರ್ಥ ಶ್ರೀಪಾದರು ಹೇಳಿದರು.

ನಗರದ ಸೋಸಲೆ ವ್ಯಾಸರಾಜ ಮಠದಲ್ಲಿ ಸೋಮವಾರ ನಡೆದ‘ನೆನಪು ಮಾಸುವ ಮುನ್ನ’ ಕಾರ್ಯಕ್ರಮ
ದಲ್ಲಿ ಮಾತನಾಡಿದ ಅವರು, ‘ವೃಂದಾವನ ಧ್ವಂಸವಾಗಿದ್ದು ನೋವಿನ ಸಂಗತಿ. ಅದನ್ನು ಮರು ನಿರ್ಮಾಣ ಮಾಡಲು ಸಹಕರಿಸಿದ ಎಲ್ಲರೂ ಪ್ರಶಂಸೆಗೆ ಅರ್ಹರು’ ಎಂದು ಅವರು ಹೇಳಿದರು.

ವೃಂದಾವನ ಮರು ನಿರ್ಮಾಣದ ಸಂದರ್ಭವನ್ನು ಹಲವರು ಎಳೆಎಳೆಯಾಗಿ ವಿವರಿಸಿದರು. ಈ ಕಾರ್ಯದಲ್ಲಿ ಪಾಲ್ಗೊಂಡಿದ್ದವರನ್ನು ಶ್ರೀಪಾದರು ಇದೇ ವೇಳೆ ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT