‘ಭಾರತ ಕರಾಟೆ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಶಿಸ್ತು ಉಲ್ಲಂಘನೆ ಪ್ರಕರಣದ ತನಿಖೆ ಮತ್ತು ವಿಚಾರಣೆಯ ಜವಾಬ್ದಾರಿಯನ್ನು ಉನ್ನತ ಮಟ್ಟದ ಸಮಿತಿ ಸದಸ್ಯರಿಗೆ ವಹಿಸಲಾಗಿತ್ತು. ತನಿಖೆಯ ವರದಿ ಕೈಸೇರಿದ ನಂತರಡಬ್ಲ್ಯುಕೆಎಫ್ ಕಾರ್ಯಕಾರಿ ಸಮಿತಿಯು ಮಾನ್ಯತೆಯನ್ನು ವಾಪಸ್ ಪಡೆಯಲು ನಿರ್ಧರಿಸಿದೆ’ ಎಂದು ಕೆಎಐ ಅಧ್ಯಕ್ಷ ಹರಿಪ್ರಸಾದ್ ಪಟ್ನಾಯಕ್ ಅವರಿಗೆ ಬರೆದಿರುವ ಪತ್ರದಲ್ಲಿ ಡಬ್ಲ್ಯುಕೆಎಫ್ ಅಧ್ಯಕ್ಷ ಆ್ಯಂಟೊನಿಯೊ ಎಸ್ಪಿನೊಸ್ ತಿಳಿಸಿದ್ದಾರೆ.