ಮೂರನೇ ಸ್ಥಾನಕ್ಕೆ ನಡೆದ ಹಣಾಹಣಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ. ಎ.ವಿ. ಬಾಳಿಗಾ ಕಾಲೇಜಿನ ವಿದ್ಯಾರ್ಥಿ ಡಾ. ನಾಜೀಮ್ ಖಾನ್ 9–11, 11–7. 11–5, 5–11, 11–13ರಲ್ಲಿ ಸಂಜೀವ ಹಜೇರಿ ಎದುರು ಪರಾಭವಗೊಂಡು ಕಂಚಿಗೆ ಸಮಾಧಾನ ಪಟ್ಟುಕೊಂಡರು. ಇನ್ನೊಂದು ಕಂಚು ದೆಹಲಿಯ ಸಾರಿಕ್ ನಿಯಾಮ್ ಪಾಲಾಯಿತು. ನಾಜೀಮ್ ಹುಬ್ಬಳ್ಳಿಯಲ್ಲಿ ಮಹಾರಾಷ್ಟ್ರ ಮಂಡಳ ಟೇಬಲ್ ಟೆನಿಸ್ ಕ್ಲಬ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.