ಬೆಂಗಳೂರು: ಕರ್ನಾಟಕದ ಅಮೋದಿನಿ ವಿ. ನಾಯಕ್ ಮತ್ತು ತಮಿಳುನಾಡಿನ ಕಂದವೇಲ್ ಎಂ. ಅವರು ಎಐಟಿಎ ಸಿಎಸ್7 18 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕಿಯರ ಮತ್ತು ಬಾಲಕರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಶುಕ್ರವಾರ ಇಲ್ಲಿ ನಡೆದ ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ಕಂದವೇಲ್6-2, 6-4ರಿಂದ ಕರ್ನಾಟಕದ ಆರ್ಯ ಗಣಪತಿ ಕಳ್ಳಂಬೆಳ್ಳ ಅವರನ್ನು ಪರಾಭವಗೊಳಿಸಿದರು. ಆರ್ಯ ಅವರು ಡಬಲ್ಸ್ ವಿಭಾಗದಲ್ಲಿ ಕಂದವೇಲ್ ಜೊತೆಗೂಡಿ ಪ್ರಶಸ್ತಿ ಜಯಿಸಿದ್ದರು.
ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ6-4, 6-0ರಿಂದ ಮೇಘನಾ ಜಿ.ಡಿ. ಅವರಿಗೆ ಸೋಲುಣಿಸಿದರು.