ಬೆಂಗಳೂರು: ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಅವರು ‘ಉದ್ಯಾನನಗರಿ’ಯಲ್ಲಿ ನಡೆಯಲಿರುವ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೂರ್ನಿಯಲ್ಲಿ ಆಡಲಿದ್ದಾರೆ.
ವಿದಾಯದ ಹಾದಿಯಲ್ಲಿರುವ ಪೇಸ್ ಅವರ ಆಟವನ್ನು ಬಹುತೇಕ ಕೊನೆಯ ಬಾರಿಗೆ ನೋಡುವ ಅವಕಾಶ ಇಲ್ಲಿಯ ಟೆನಿಸ್ಪ್ರಿಯರಿಗೆ ಸಿಗಲಿದೆ. ಪೇಸ್ ಅವರಿಗೂ ಇದು ಭಾರತದಲ್ಲಿ ಕೊನೆಯ ಟೂರ್ನಿಯಾಗುವ ಸಾಧ್ಯತೆ ಇದೆ. ಫೆಬ್ರುವರಿ ಹತ್ತರಿಂದ ಕರ್ನಾಟಕ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್ಎಲ್ಟಿಎ)ಅಂಕಣದಲ್ಲಿ ಟೂರ್ನಿ ನಡೆಯಲಿದೆ.