ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೀರಜ್‌ಗೆ ಆಘಾತ ನೀಡಿದ ರಿಷಭ್‌

ಬೆಂಗಳೂರು ಓಪನ್‌ ಎಐಟಿಎ ರ‍್ಯಾಂಕಿಂಗ್‌ ಟೆನಿಸ್‌ ಟೂರ್ನಿ
Last Updated 20 ಅಕ್ಟೋಬರ್ 2018, 18:52 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೇಯಾಂಕ ರಹಿತ ಆಟಗಾರ ರಿಷಭ್‌ ಅಗರವಾಲ್‌, ಬೆಂಗಳೂರು ಓಪನ್‌ ಎಐಟಿಎ ರ‍್ಯಾಂಕಿಂಗ್‌ ಟೆನಿಸ್‌ ಟೂರ್ನಿಯ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಆಟಗಾರ ಕೆ.ಎಸ್‌.ಧೀರಜ್‌ಗೆ ಆಘಾತ ನೀಡಿದ್ದಾರೆ.

ಕೆಎಸ್‌ಎಲ್‌ಟಿಎ ಅಂಗಳದಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಹಣಾಹಣಿಯಲ್ಲಿ ಆಂಧ್ರಪ್ರದೇಶದ ರಿಷಭ್‌ 9–8ರಿಂದ ಗೆದ್ದರು.

ಒಟ್ಟು 90 ಮಂದಿ ಅರ್ಹತಾ ಸುತ್ತಿನಲ್ಲಿ ಪೈಪೋಟಿ ನಡೆಸಲಿದ್ದಾರೆ. ಭಾನುವಾರ ಅಂತಿಮ ಸುತ್ತಿನ ಹೋರಾಟಗಳು ಜರುಗಲಿದ್ದು ಇದರಲ್ಲಿ ಗೆದ್ದ ಅಗ್ರ ಎಂಟು ಮಂದಿ ಸೋಮವಾರ ನಡೆಯುವ ಮುಖ್ಯ ಹಂತದ ಸ್ಪರ್ಧೆಗೆ ಅರ್ಹತೆ ಗಳಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT