ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಂದ್ರಗ್ರಹಣ ವಿಸ್ಮಯಕಾರಿ ಪಕ್ರಿಯೆ’

Last Updated 2 ಫೆಬ್ರುವರಿ 2018, 9:12 IST
ಅಕ್ಷರ ಗಾತ್ರ

ಸಿರುಗುಪ್ಪ: ‘ಚಂದ್ರಗ್ರಹಣವು ಆಕಾಶದಲ್ಲಿ ನಡೆಯುವಂಥ ವಿಸ್ಮಯಕಾರಿ ಪ್ರಕ್ರಿಯೆ. ಇದರಿಂದ ಜನರಿಗೆ ಹಾಗೂ ಗರ್ಭಿಣಿಯರಿಗೆ ದುಷ್ಪರಿಣಾಮ ಉಂಟಾಗುವುದಿಲ್ಲ’ ಎಂದು ಬಸವಕಲ್ಯಾಣದ ಶರಣ ಬಸವರಾಜಪ್ಪ ತಿಳಿಸಿದರು.

ನಗರದ ಬಸವ ಭವನದಲ್ಲಿ ಚಂದ್ರಗ್ರಹಣ ನಿಮಿತ್ತ ಜನರಲ್ಲಿ ಜಾಗೃತಿ ಮೂಡಿಸಲು ಬುಧವಾರ ರಾತ್ರಿ ಸಿರಿಧಾನ್ಯಗಳನ್ನು ಬಳಸಿ ವಿಶೇಷ ಸಿಹಿ ಹಾಗೂ ಇತರ ಖಾದ್ಯಗಳನ್ನು ಗ್ರಹಣದ ಸಮಯದಲ್ಲಿಯೇ ಉಣಬಡಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಖಗ್ರಾಸ ಚಂದ್ರಗ್ರಹಣ ವೇಳೆಯಲ್ಲಿ ಊಟ ಮಾಡುವುದರಿಂದ ದುಷ್ಪರಿಣಾಮ ಆಗುತ್ತದೆ ಎಂಬ ನಂಬಿಕೆ ಬಹಳ ಜನರಲ್ಲಿದೆ. ಇದನ್ನು ಶರಣರು ಒಪ್ಪುವುದಿಲ್ಲ’ ಎಂದರು.

ಬಸವ ಬಳಗದ ಎನ್‌.ಎಂ.ಶಿವಪ್ರಕಾಶ್‌, ಶಿವಕುಮಾರ್ ಬಳಿಗಾರ್, ಕೆ.ನಾಗನಗೌಡ, ವಿರೂಪಾಕ್ಷಗೌಡ, ಅಕ್ಕನ ಬಳಗದ ಸದಸ್ಯರು, ಸಾವಯವ ರೈತ ಹಾವಿನಾಳ್ ಸಿದ್ದರಾಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT