ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ನಮ್ಮೆದುರು ಗೆಲ್ಲಲು ಬಯಸಿತ್ತು, ಇದೀಗ ಸುಲಭವಾಗಿ ಗೆಲ್ಲಬಹುದು: ಪಾಕಿಸ್ತಾನ

ಡೇವಿಸ್ ಕಪ್ | ಪಂದ್ಯ ಸ್ಥಳಾಂತರಕ್ಕೆ ಪಿಟಿಎಫ್‌ ಅಧ್ಯಕ್ಷ ಸಲೀಂ ಪ್ರತಿಕ್ರಿಯೆ
Last Updated 21 ನವೆಂಬರ್ 2019, 10:36 IST
ಅಕ್ಷರ ಗಾತ್ರ

ನವದೆಹಲಿ: ಭಾರತ–ಪಾಕಿಸ್ತಾನ ಡೇವಿಸ್‌ ಕಪ್‌ ಪಂದ್ಯಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿರುವ ಹಿರಿಯ ಆಟಗಾರರು, ಕಜಕಿಸ್ತಾನಕ್ಕೆ ತೆರಳಲು ನಿರಾಕರಿಸಿರುವುದರಿಂದ ಪಾಕಿಸ್ತಾನ ಟೆನಿಸ್‌ ಮಂಡಳಿ(ಪಿಟಿಎಫ್‌) ಕಿರಿಯ ಆಟಗಾರರ ತಂಡವನ್ನೇ ಕಳುಹಿಸಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವಪಿಟಿಎಫ್‌ ಅಧ್ಯಕ್ಷ ಸಲೀಂ ಸೈಫುಲ್ಲಾ ಖಾನ್‌,ಭಾರತವು ನಮ್ಮ ವಿರುದ್ಧ ಈ ಪಂದ್ಯದಲ್ಲಿ ಗೆಲುವು ಸಾಧಿಸಬೇಕೆಂದು ಬಯಸಿತ್ತು. ಇದೀಗ ಭಾರತಕ್ಕೆ ಜಯ ಸುಲಭವಾಗಿ ಸಿಗಲಿದೆ ಎಂದು ಹೇಳಿದ್ದಾರೆ.

‘ಡೇವಿಸ್‌ ಕಪ್‌ ಪಂದ್ಯ ಆಡಲು ನಮ್ಮ ಹಿರಿಯ ಆಟಗಾರರು ನಿರಾಕರಿಸಿದ್ದಾರೆ. ಹಾಗಾಗಿ ಕಿರಿಯ ಆಟಗಾರರ ತಂಡವನ್ನೇ ಕಳುಹಿಸಿದ್ದೇವೆ. ಎಲ್ಲರೂ 16–17 ವಯಸ್ಸಿನವರು. ಇದರಿಂದ ಅವರು ಅನುಭವವನ್ನು ಪಡೆಯಲಿದ್ದಾರೆ’ ಎಂದು ಸಲೀಂ ತಿಳಿಸಿದ್ದಾರೆ.

ಮುಂದುವರಿದು,‘ಭಾರತ ಈ ಪಂದ್ಯವನ್ನು ಗೆಲ್ಲಲ್ಲೇಬೇಕೆಂದು ಬಯಸಿತ್ತು. ಇದೀಗ ಸುಲಭವಾಗಿ ಗೆಲ್ಲಬಹುದು. ಪ್ರತಿದಿನವು ನೂರಾರು ಭಾರತೀಯರು(ಯಾತ್ರಿಗಳು) ಪಾಕಿಸ್ತಾನಕ್ಕೆ ಬರುತ್ತಾರೆ. ಇಸ್ಲಾಮಾಬಾದ್‌ನಲ್ಲಿನ ನಮ್ಮ ಹೋಟೆಲ್‌ಗಳು ಭಾರತೀಯರಿಂದ ತುಂಬಿವೆ. ಆದರೆ, ಆರು ಆಟಗಾರರ ತಂಡ ಮಾತ್ರ ಪಾಕಿಸ್ತಾನಕ್ಕೆ ಬರಲಾರದು. ಇದು ಅವಮಾನದ ಸಂಗತಿ’ ಎಂದು ಪ್ರತಿಪಾದಿಸಿದ್ದಾರೆ.

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನವೆಂಬರ್‌ 29–30ರಂದು ಪಂದ್ಯನಡೆಯಬೇಕಿತ್ತು. ಆದರೆ,ಭಾರತವು ಭದ್ರತೆ ಸಂಬಂಧ ಕಳವಳ ವ್ಯಕ್ತಪಡಿಸಿದ್ದರಿಂದ ಪಂದ್ಯವನ್ನು ಕಜಕಿಸ್ತಾನದ ರಾಜಧಾನಿ ನೂರ್‌–ಸುಲ್ತಾನ್‌ಗೆಅಂತರರಾಷ್ಟ್ರೀಯ ಟೆನಿಸ್‌ ಮಂಡಳಿ(ಐಟಿಎಫ್) ಸ್ಥಳಾಂತರಿಸಿತ್ತು.

ಈ ನಿರ್ಧಾರವನ್ನುಹಿರಿಯ ಆಟಗಾರರಾದ ಐಸಾಮ್‌ ಉಲ್‌ ಹಕ್‌ ಖುರೇಷಿ ಹಾಗೂ ಅಖೀಲ್‌ ಖಾನ್‌ ವಿರೋಧಿಸಿ ಪ್ರತಿಭಟಿಸಿದ್ದರು. ಹೀಗಾಗಿಅವರನ್ನು ಕೈಬಿಟ್ಟಿರುವ ಪಿಟಿಎಫ್‌, 17 ವರ್ಷದ ಯುವ ಆಟಗಾರರಾದ ಹುಜೈಫಾ ಅಬ್ದುಲ್‌ ರೆಹ್ಮಾನ್‌ ಮತ್ತು ಶೋಯೆಬ್‌ ಖಾನ್‌ ಅವರಿಗೆ ತಂಡದಲ್ಲಿ ಅವಕಾಶ ನೀಡಿದೆ.

ಈ ಇಬ್ಬರೂಕಿರಿಯರ ಟೆನಿಸ್‌ರ‍್ಯಾಂಕಿಂಗ್‌ನಲ್ಲಿಯೂ ಕೆಳಕ್ರಮಾಂದಲ್ಲಿದ್ದು, ಕ್ರಮವಾಗಿ 446 ಮತ್ತು 1004ನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT