ಎಪಿಎಂಸಿ ಆವರಣದಿಂದ ಹೊರಟ ದತ್ತ ಅವರನ್ನು ಸಾವಿರಾರು ಅಭಿಮಾನಿಗಳು ಮತ್ತು ಕಾರ್ಯಕರ್ತರು ಹಿಂಬಾಲಿಸಿದರು. ದತ್ತ ಅವರು ಅಲಂಕೃತ ಎತ್ತಿನ ಗಾಡಿಯಲ್ಲಿ ಕುಳಿತು ಸಾಗಿದರು. ನಂತರ ದತ್ತ ಅವರು ಕದಂಬ ವೃತ್ತದಲ್ಲಿ ಮಾತನಾಡಿ, ‘ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರು ಸ್ವಪ್ರೇರಣೆಯಿಂದ ಬಂದಿರುವುದು ನನ್ನ ಪ್ರೀತಿ ರಾಜಕಾರಣಕ್ಕೆ ಸಂದ ಗೌರವವಾಗಿದೆ. ಯಾವುದೇ ಜಾತಿ ಬಲ. ತೋಳ್ಬಲ ಅಥವಾ ಹಣಬಲ ಇಲ್ಲಿ ಕೆಲಸ ಮಾಡುವುದಿಲ್ಲ. ಕೇವಲ ನಿಷ್ಕಲ್ಮಷ ಪ್ರೀತಿಯೊಂದೆ ಜನರನ್ನು ಗೆಲ್ಲುವ ಸಾಧನವಾಗಿದೆ. ಆ ಪ್ರೀತಿಯ ಪ್ರದರ್ಶನದಿಂದ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ತಾಲ್ಲೂಕಿನಲ್ಲಿ ಶಾಶ್ವತ ನೀರಾವರಿ ಕಲ್ಪಿಸುವುದು ಮತ್ತು ನಿರುದ್ಯೋಗ ನಿವಾರಣೆಗೆ ಪ್ರಯತ್ನಿಸುವುದು ನನ್ನ ಮುಂದಿನ ಗುರಿ’ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಅಧ್ಯಕ್ಷ ಕೋಡಿಹಳ್ಖಿ ಮಹೇಶ್ವರಪ್ಪ, ಉಪಾಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ, ಸೀಗೇಹಡ್ಲು ಹರೀಶ್, ಬಿದರೆ ಜಗದೀಶ್, ಬಿಳುವಾಲ ಪ್ರಕಾಶ್ ಇದ್ದರು.