ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದಾಂತ್‌, ಶೈವಿ ಶುಭಾರಂಭ

ಕೆಎಸ್‌ಎಲ್‌ಟಿಎ ಟ್ರಾನ್ಸ್‌ಫಾರ್ಮ್‌ ಸೂಪರ್‌ ಸಿರೀಸ್‌ 14 ವರ್ಷದೊಳಗಿನವರ ಟೆನಿಸ್‌ ಟೂರ್ನಿ
Last Updated 1 ಆಗಸ್ಟ್ 2022, 13:35 IST
ಅಕ್ಷರ ಗಾತ್ರ

ಬೆಂಗಳೂರು: ಮೊದಲ ಶ್ರೇಯಾಂಕ ಪಡೆದಿರುವ ವೇದಾಂತ್ ಗುಂಡು ಹಾಗೂ ಶೈವಿ ದಲಾಲ್ ಅವರು ಇಲ್ಲಿ ಆರಂಭವಾದ ಕೆಎಸ್‌ಎಲ್‌ಟಿಎ ಟ್ರಾನ್ಸ್‌ಫಾರ್ಮ್‌ ಸೂಪರ್‌ ಸಿರೀಸ್‌ 14 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಕೆಎಸ್‌ಎಲ್‌ಟಿಎ ಅಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಬಾಲಕರ ವಿಭಾಗದ ಮೊದಲ ಸುತ್ತಿನಲ್ಲಿ, ತೆಲಂಗಾಣದ ವೇದಾಂತ್‌6-4, 6-4ರಿಂದ ಕರ್ನಾಟಕದ ತೇಜಸ್‌ ಆರ್. ಅವರನ್ನು ಸೋಲಿಸಿದರು. ಬಾಲಕಿಯರ ವಿಭಾಗದಲ್ಲಿ ಗುಜರಾತ್‌ನ ಶೈವಿ6-0, 6-0ರಿಂದ ಯಾಹಾನಾ ಅರೋರಾ ಅವರನ್ನು ಪರಾಭವಗೊಳಿಸಿದರು.

ಮಳೆಯ ಕಾರಣ ಬಾಲಕರ ವಿಭಾಗದಲ್ಲಿ ಆರು ಪಂದ್ಯಗಳು ಸ್ಥಗಿತಗೊಂಡಿದ್ದವು. ಈ ವಿಭಾಗದಲ್ಲಿ ಶರಣ್ ಸೋಮಾಸಿ6-2, 6-1ರಿಂದ ಅರ್ಜುನ್ ಸೂರಿ ಎದುರು, ಕೌಶಿಕ್ ರಾಜೇಶ್6-4, 6-0ರಿಂದ ಆಯಾನ್ ತಾರೀನ್ ವಿರುದ್ಧ, ಧನುಶ್ ಬಿಲ್ಲಾಪುರ6-4, 6-3ರಿಂದ ಇಶಾನ್ ಬ್ಯಾಡಗಿ ಎದುರು, ಶ್ರೀಕರ್ ದೋನಿ6-2, 6-3ರಿಂದ ತನಿಶ್ ವೇಪನಪಳ್ಳಿ ಎದುರು, ಅನಂತಕೃಷ್ಣನ್‌6-1, 6-1ರಿಂದ ಅನುರಾಗ್ ಕಳ್ಳಂಬೆಳ್ಳ ಎದುರು, ಕ್ರಿಸ್ಟೊಬಾಬು6-1, 6-2ರಿಂದ ಅನಿರುದ್ಧ ಪಳನಿಸ್ವಾಮಿ ವಿರುದ್ಧ ಗೆದ್ದರು.

ಬಾಲಕಿಯರ ವಿಭಾಗದ ಮೊದಲ ಸುತ್ತಿನ ಇನ್ನುಳಿದ ಹಣಾಹಣಿಗಳಲ್ಲಿ ಲಾವಣ್ಯ ತಿವಾರಿ6-3, 6-4ರಿಂದ ತನು ವಿಶ್ವಾಸ್ ಎದುರು, ಸಾನ್ವಿ ಮಿಶ್ರಾ6-2, 6-1ರಿಂದ ಅನ್ವೇಷಾ ಧರ್ ಎದುರು, ಕಾಶ್ವಿ ಸುನೀಲ್‌6-1, 6-1ರಿಂದ ದಿಶಾ ಕುಮಾರ್ ಎದುರು, ಸಿಗ್ಧಾ ಕಾಂತ 6-3, 6-1ರಿಂದ ಇಂದುಶಾ ನಿಮಕಾಯಲ ಎದುರು, ಮೇಘನಾ ಜಿ.ಡಿ.6-1, 6-1ರಿಂದ ಆದ್ಯಾ ರಿತೇಶ್‌ಕುಮಾರ್, ಶ್ರೀನಿತಿ ಚೌಧರಿ6-3, 6-0ರಿಂದ ಪೂಜಾ ನಾಗರಾಜ್ ಎದುರು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT