ಎರಡನೇ ಸುತ್ತಿನ ಹಣಾಹಣಿಯಲ್ಲಿ ಆರನೇ ಶ್ರೇಯಾಂಕದ ನಿಕ್ಷೇಪ್, ಕರ್ನಾಟಕದವರೇ ಆದ ಮನೀಷ್ ಜಿ. ಅವರನ್ನು 6–4, 3–6, 6–2ರಿಂದ ಸೋಲಿಸಿದರು. ರಾಜ್ಯದ ಮತ್ತೊಬ್ಬ ಆಟಗಾರ ವಸಿಷ್ಠ ಚೆರುಕು ಕೂಡ ಎಂಟರಘಟ್ಟ ಪ್ರವೇಶಿಸಿದರು. ಅವರು ಎರಡನೇ ಶ್ರೇಯಾಂಕದ ಗೋಕುಲ್ ಸುರೇಶ್(ಪಂದ್ಯದಿಂದ ನಿವೃತ್ತಿ) ಅವರನ್ನು 6–1, 2–0ರಿಂದ ಮಣಿಸಿದರು.