<p><strong>ಮುಂಬೈ</strong>: ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ರನ್ಗಳ ಹೊಳೆ ಹರಿಯಿತು. ಅದರಲ್ಲಿ ಭಾರತ ತಂಡವು ಈಜಿ ಗೆದ್ದಿತು. ಆದರೆ ಕಠಿಣ ಪೈಪೋಟಿಯೊಡ್ಡಿದ ಇಂಗ್ಲೆಂಡ್ ತಂಡವು ಕ್ರಿಕೆಟ್ ಪ್ರಿಯರ ಮನಗೆದ್ದಿತು. </p><p>ಇಲ್ಲಿ ನಡೆದ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು 7 ರನ್ ಗಳಿಂದ ಸೋಲಿಸಿದ ಭಾರತ ಫೈನಲ್ಗೆ ಲಗ್ಗೆ ಇಟ್ಟಿತು. ಹಾಲಿ ಚಾಂಪಿಯನ್ ಭಾರತವು ಇದೇ 8ರಂದು ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. </p><p>ಸಂಜು ಸ್ಯಾಮ್ಸನ್ (89; 42ಎ) ಅಮೋಘ ಬ್ಯಾಟಿಂಗ್, ಅಕ್ಷರ್ ಪಟೇಲ್ ಅಮೋಘ ಫೀಲ್ಡಿಂಗ್ ಮತ್ತು ಕ್ಯಾಚಿಂಗ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವು. ಇನ್ನೊಂದೆಡೆ ದಿಟ್ಟ ಹೋರಾಟ ಮಾಡಿದ ಇಂಗ್ಲೆಂಡ್ ತಂಡದ ಯುವ ಬ್ಯಾಟರ್ ಜೇಕಬ್ ಬೆಥೆಲ್ (105; 48ಎ) ಶತಕ ಬಹುಕಾಲ ನೆನಪಿನಲ್ಲಿ ಉಳಿಯಲಿದೆ. </p><p>ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸಂಜು ಬ್ಯಾಟಿಂಗ್ನಿಂದ ಆತಿಥೇಯ ತಂಡವು 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 253 ರನ್ ಗಳಿಸಿತು. ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 246 ರನ್ ಗಳಿಸಿತು.</p><p>ಇಂಗ್ಲೆಂಡ್ ತಂಡವು ಪವರ್ಪ್ಲೇನಲ್ಲಿ 68 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಅದರಲ್ಲಿ ತಂಡದ ನಾಯಕ ಮತ್ತು ಸ್ಫೋಟಕ ಶೈಲಿಯ ಬ್ಯಾಟರ್ ಹ್ಯಾರಿ ಬ್ರೂಕ್ ಅವರ ವಿಕೆಟ್ ಪಡೆದ ಬೂಮ್ರಾ (33ಕ್ಕೆ1) ಅವರ ಅಮೋಘ ಬೌಲಿಂಗ್ ರಂಗೇರಿತು. ಬೂಮ್ರಾ ಡೆತ್ ಓವರ್ಗಳಲ್ಲಿಯೂ ಮಿಂಚಿದರು. ಒಂದೆಡೆ ವಿಕೆಟ್ಗಳು ಉರು ಳುತ್ತಿದ್ದರೂ ಇಂಗ್ಲೆಂಡ್ ಖಾತೆಗೆ ಸಿಕ್ಸರ್, ಬೌಂಡರಿಗಳು ದಾಖಲಾಗುತ್ತಲೇ ಇದ್ದವು. ಸ್ಪಿನ್ನರ್ ವರುಣ್ ಚಕ್ರವರ್ತಿ (64ಕ್ಕೆ1)ಈ ಪಂದ್ಯದಲ್ಲಿಯೂ ದುಬಾರಿಯಾದರು. </p><p>ಆದರೆ ಬೌಲಿಂಗ್ನಲ್ಲಿ ಮಿಂಚಿದ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಫೀಲ್ಡಿಂಗ್ನಲ್ಲಿ ಸಾಹಸ ಮೆರೆದರು. ಬ್ರೂಕ್ ಅವರ ಕ್ಯಾಚ್ ಅನ್ನು ಡೈವ್ ಮಾಡಿ ಪಡೆದ ರೀತಿ ಆಕರ್ಷಕ ವಾಗಿತ್ತು. ಫಿಲ್ ಸಾಲ್ಟ್ ಕ್ಯಾಚ್ ಪಡೆದ ಅಕ್ಷರ್ ತಂಡದಲ್ಲಿ ವಿಶ್ವಾಸದ ಅಲೆ ಎಬ್ಬಿಸಿದ್ದರು. 20 ಎಸೆತಗಳಲ್ಲಿ35 ರನ್ ಹೊಡೆದಿದ್ದ ವಿಲ್ ಜ್ಯಾಕ್ಸ್ ಆರ್ಷದೀಪ್ ಸಿಂಗ್ ಎಸೆತವನ್ನು ಸಿಕ್ಸರ್ಗೆತ್ತುವ ಪ್ರಯತ್ನ ಮಾಡಿದರು. ಆದರೆ ಬೌಂಡರಿಗೆರೆಯ ಬಳಿ ವೇಗವಾಗಿ ಓಡಿಬಂದ ಅಕ್ಷರ್ ಚೆಂಡನ್ನು ಹಿಡಿತಕ್ಕೆ ಪಡೆದರು. ಆದರೆ ವೇಗ ನಿಯಂತ್ರಿಸಲಾಗದೇ ತಾವು ಬೌಂಡರಿಗೆರೆ ದಾಟಿಯೇ ಬಿಡುವ ಮುನ್ನ ಸನಿಹದಲ್ಲಿದ್ದ ಫೀಲ್ಡರ್ ಶಿವಂ ದುಬೆಯತ್ತ ಚೆಂಡೆಸೆದರು. ಶಿವಂ ಕ್ಯಾಚ್ ಪಡೆದರು. ಕೊನೆಯ ಓವರ್ನಲ್ಲಿ ಬೆಥೆಲ್ ರನ್ಔಟ್ ಆದರು. ಆಗ ತಂಡಕ್ಕೆ 5 ಎಸೆತಗಳಲ್ಲಿ 29 ರನ್ಗಳ ಅಗತ್ಯವಿತ್ತು. ದುಬೆ ಹಾಕಿದ ಆ ಓವರ್ನ ಲ್ಲಿ ಜೋಫ್ರಾ ಆರ್ಚರ್ 3 ಸಿಕ್ಸರ್ ಹೊಡೆದರು. </p>.ಬೆಥೆಲ್ ಬೆನ್ನತ್ತಿದರೂ ಬಗ್ಗದ ಭಾರತ; ರನ್ ಹೊಳೆ ಹರಿದ ಪಂದ್ಯದಲ್ಲಿ ಮಿಂಚಿದ ಸಂಜು.<p><strong>ಸಂಜು ಆರ್ಭಟ: </strong>ಸಂಜು ಸ್ಯಾಮ್ಸನ್ ಅವರು ವೇಗಿ ಜೋಫ್ರಾ ಆರ್ಚರ್ ಸವಾಲನ್ನು ಮೀರಿ ನಿಂತರು. ಕೇರಳದ ಸಂಜು ಸತತ ಎರಡನೇ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಗಳಿಸಿದರು. ಸೂಪರ್ 8ರ ಹಂತದ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು ಏಕಾಂಗಿಯಾಗಿ ಹೋರಾಡಿದ್ದ ಸಂಜು ಅಜೇಯ 97 ರನ್ ಗಳಿಸಿದ್ದರು. ಅದರಿಂದಾಗಿ ಆ ಪಂದ್ಯದಲ್ಲಿ ಗೆದ್ದಿದ್ದ ಭಾರತ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿತ್ತು. </p><p>ಅಭಿಷೇಕ್ ಶರ್ಮಾ (9; 7ಎ, 4X2) ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಸಂಜು 8 ಬೌಂಡರಿ ಮತ್ತು 7 ಸಿಕ್ಸರ್ ದಾಖಲಿಸಿದರು. ಮೂರನೇ ಕ್ರಮಾಂಕ ದಲ್ಲಿ ಕ್ರೀಸ್ಗೆ ಬಂದ ಎಡಗೈ ಬ್ಯಾಟರ್ ಇಶಾನ್ ಕಿಶನ್ (39; 18ಎ, 4X4, 6X2) ಅವರೊಂದಿಗೆ ಸಂಜು ಎರಡನೇ ವಿಕೆಟ್ ಜೊತೆಯಾಟದಲ್ಲಿ 97 ರನ್ ಸೇರಿಸಿದರು. ಇದರಿಂದಾಗಿ 8.3 ಓವರ್ಗಳಲ್ಲಿ ತಂಡದ ಮೊತ್ತವು ‘ಶತಕ’ದ ಗಡಿ ಮುಟ್ಟಿತು. </p><p>ಆದರೆ ಇಶಾನ್, ಸ್ಪಿನ್ನರ್ ಹತ್ತನೇ ಓವರ್ನಲ್ಲಿ ಅದಿಲ್ ರಶೀದ್ ಎಸೆತದಲ್ಲಿ ವಿಲ್ ಜ್ಯಾಕ್ಸ್ಗೆ ಕ್ಯಾಚ್ ಆದರು. ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ಶಿವಂ ದುಬೆ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಸಂಜು ಮತ್ತು ಶಿವಂ ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ 22 ಎಸೆತಗಳಲ್ಲಿ 43 ರನ್ ಸೇರಿಸಿದರು. ಆದರೆ ಹಾರ್ದಿಕ್ ಪಾಂಡ್ಯ (27; 12ಎ) ಎಂದಿನಂತೆ ಅಮೋಘ ಬ್ಯಾಟಿಂಗ್ ಮಾಡಿದರು. ತಿಲಕ್ ವರ್ಮಾ (21; 7ಎ, 6X3) ಅವರ ಕಾಣಿಕೆ ತಂಡದ ಮೊತ್ತ ಹೆಚ್ಚಿಸಲು ನೆರವಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ರನ್ಗಳ ಹೊಳೆ ಹರಿಯಿತು. ಅದರಲ್ಲಿ ಭಾರತ ತಂಡವು ಈಜಿ ಗೆದ್ದಿತು. ಆದರೆ ಕಠಿಣ ಪೈಪೋಟಿಯೊಡ್ಡಿದ ಇಂಗ್ಲೆಂಡ್ ತಂಡವು ಕ್ರಿಕೆಟ್ ಪ್ರಿಯರ ಮನಗೆದ್ದಿತು. </p><p>ಇಲ್ಲಿ ನಡೆದ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು 7 ರನ್ ಗಳಿಂದ ಸೋಲಿಸಿದ ಭಾರತ ಫೈನಲ್ಗೆ ಲಗ್ಗೆ ಇಟ್ಟಿತು. ಹಾಲಿ ಚಾಂಪಿಯನ್ ಭಾರತವು ಇದೇ 8ರಂದು ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. </p><p>ಸಂಜು ಸ್ಯಾಮ್ಸನ್ (89; 42ಎ) ಅಮೋಘ ಬ್ಯಾಟಿಂಗ್, ಅಕ್ಷರ್ ಪಟೇಲ್ ಅಮೋಘ ಫೀಲ್ಡಿಂಗ್ ಮತ್ತು ಕ್ಯಾಚಿಂಗ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವು. ಇನ್ನೊಂದೆಡೆ ದಿಟ್ಟ ಹೋರಾಟ ಮಾಡಿದ ಇಂಗ್ಲೆಂಡ್ ತಂಡದ ಯುವ ಬ್ಯಾಟರ್ ಜೇಕಬ್ ಬೆಥೆಲ್ (105; 48ಎ) ಶತಕ ಬಹುಕಾಲ ನೆನಪಿನಲ್ಲಿ ಉಳಿಯಲಿದೆ. </p><p>ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸಂಜು ಬ್ಯಾಟಿಂಗ್ನಿಂದ ಆತಿಥೇಯ ತಂಡವು 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 253 ರನ್ ಗಳಿಸಿತು. ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 246 ರನ್ ಗಳಿಸಿತು.</p><p>ಇಂಗ್ಲೆಂಡ್ ತಂಡವು ಪವರ್ಪ್ಲೇನಲ್ಲಿ 68 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಅದರಲ್ಲಿ ತಂಡದ ನಾಯಕ ಮತ್ತು ಸ್ಫೋಟಕ ಶೈಲಿಯ ಬ್ಯಾಟರ್ ಹ್ಯಾರಿ ಬ್ರೂಕ್ ಅವರ ವಿಕೆಟ್ ಪಡೆದ ಬೂಮ್ರಾ (33ಕ್ಕೆ1) ಅವರ ಅಮೋಘ ಬೌಲಿಂಗ್ ರಂಗೇರಿತು. ಬೂಮ್ರಾ ಡೆತ್ ಓವರ್ಗಳಲ್ಲಿಯೂ ಮಿಂಚಿದರು. ಒಂದೆಡೆ ವಿಕೆಟ್ಗಳು ಉರು ಳುತ್ತಿದ್ದರೂ ಇಂಗ್ಲೆಂಡ್ ಖಾತೆಗೆ ಸಿಕ್ಸರ್, ಬೌಂಡರಿಗಳು ದಾಖಲಾಗುತ್ತಲೇ ಇದ್ದವು. ಸ್ಪಿನ್ನರ್ ವರುಣ್ ಚಕ್ರವರ್ತಿ (64ಕ್ಕೆ1)ಈ ಪಂದ್ಯದಲ್ಲಿಯೂ ದುಬಾರಿಯಾದರು. </p><p>ಆದರೆ ಬೌಲಿಂಗ್ನಲ್ಲಿ ಮಿಂಚಿದ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಫೀಲ್ಡಿಂಗ್ನಲ್ಲಿ ಸಾಹಸ ಮೆರೆದರು. ಬ್ರೂಕ್ ಅವರ ಕ್ಯಾಚ್ ಅನ್ನು ಡೈವ್ ಮಾಡಿ ಪಡೆದ ರೀತಿ ಆಕರ್ಷಕ ವಾಗಿತ್ತು. ಫಿಲ್ ಸಾಲ್ಟ್ ಕ್ಯಾಚ್ ಪಡೆದ ಅಕ್ಷರ್ ತಂಡದಲ್ಲಿ ವಿಶ್ವಾಸದ ಅಲೆ ಎಬ್ಬಿಸಿದ್ದರು. 20 ಎಸೆತಗಳಲ್ಲಿ35 ರನ್ ಹೊಡೆದಿದ್ದ ವಿಲ್ ಜ್ಯಾಕ್ಸ್ ಆರ್ಷದೀಪ್ ಸಿಂಗ್ ಎಸೆತವನ್ನು ಸಿಕ್ಸರ್ಗೆತ್ತುವ ಪ್ರಯತ್ನ ಮಾಡಿದರು. ಆದರೆ ಬೌಂಡರಿಗೆರೆಯ ಬಳಿ ವೇಗವಾಗಿ ಓಡಿಬಂದ ಅಕ್ಷರ್ ಚೆಂಡನ್ನು ಹಿಡಿತಕ್ಕೆ ಪಡೆದರು. ಆದರೆ ವೇಗ ನಿಯಂತ್ರಿಸಲಾಗದೇ ತಾವು ಬೌಂಡರಿಗೆರೆ ದಾಟಿಯೇ ಬಿಡುವ ಮುನ್ನ ಸನಿಹದಲ್ಲಿದ್ದ ಫೀಲ್ಡರ್ ಶಿವಂ ದುಬೆಯತ್ತ ಚೆಂಡೆಸೆದರು. ಶಿವಂ ಕ್ಯಾಚ್ ಪಡೆದರು. ಕೊನೆಯ ಓವರ್ನಲ್ಲಿ ಬೆಥೆಲ್ ರನ್ಔಟ್ ಆದರು. ಆಗ ತಂಡಕ್ಕೆ 5 ಎಸೆತಗಳಲ್ಲಿ 29 ರನ್ಗಳ ಅಗತ್ಯವಿತ್ತು. ದುಬೆ ಹಾಕಿದ ಆ ಓವರ್ನ ಲ್ಲಿ ಜೋಫ್ರಾ ಆರ್ಚರ್ 3 ಸಿಕ್ಸರ್ ಹೊಡೆದರು. </p>.ಬೆಥೆಲ್ ಬೆನ್ನತ್ತಿದರೂ ಬಗ್ಗದ ಭಾರತ; ರನ್ ಹೊಳೆ ಹರಿದ ಪಂದ್ಯದಲ್ಲಿ ಮಿಂಚಿದ ಸಂಜು.<p><strong>ಸಂಜು ಆರ್ಭಟ: </strong>ಸಂಜು ಸ್ಯಾಮ್ಸನ್ ಅವರು ವೇಗಿ ಜೋಫ್ರಾ ಆರ್ಚರ್ ಸವಾಲನ್ನು ಮೀರಿ ನಿಂತರು. ಕೇರಳದ ಸಂಜು ಸತತ ಎರಡನೇ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಗಳಿಸಿದರು. ಸೂಪರ್ 8ರ ಹಂತದ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು ಏಕಾಂಗಿಯಾಗಿ ಹೋರಾಡಿದ್ದ ಸಂಜು ಅಜೇಯ 97 ರನ್ ಗಳಿಸಿದ್ದರು. ಅದರಿಂದಾಗಿ ಆ ಪಂದ್ಯದಲ್ಲಿ ಗೆದ್ದಿದ್ದ ಭಾರತ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿತ್ತು. </p><p>ಅಭಿಷೇಕ್ ಶರ್ಮಾ (9; 7ಎ, 4X2) ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಸಂಜು 8 ಬೌಂಡರಿ ಮತ್ತು 7 ಸಿಕ್ಸರ್ ದಾಖಲಿಸಿದರು. ಮೂರನೇ ಕ್ರಮಾಂಕ ದಲ್ಲಿ ಕ್ರೀಸ್ಗೆ ಬಂದ ಎಡಗೈ ಬ್ಯಾಟರ್ ಇಶಾನ್ ಕಿಶನ್ (39; 18ಎ, 4X4, 6X2) ಅವರೊಂದಿಗೆ ಸಂಜು ಎರಡನೇ ವಿಕೆಟ್ ಜೊತೆಯಾಟದಲ್ಲಿ 97 ರನ್ ಸೇರಿಸಿದರು. ಇದರಿಂದಾಗಿ 8.3 ಓವರ್ಗಳಲ್ಲಿ ತಂಡದ ಮೊತ್ತವು ‘ಶತಕ’ದ ಗಡಿ ಮುಟ್ಟಿತು. </p><p>ಆದರೆ ಇಶಾನ್, ಸ್ಪಿನ್ನರ್ ಹತ್ತನೇ ಓವರ್ನಲ್ಲಿ ಅದಿಲ್ ರಶೀದ್ ಎಸೆತದಲ್ಲಿ ವಿಲ್ ಜ್ಯಾಕ್ಸ್ಗೆ ಕ್ಯಾಚ್ ಆದರು. ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ಶಿವಂ ದುಬೆ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಸಂಜು ಮತ್ತು ಶಿವಂ ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ 22 ಎಸೆತಗಳಲ್ಲಿ 43 ರನ್ ಸೇರಿಸಿದರು. ಆದರೆ ಹಾರ್ದಿಕ್ ಪಾಂಡ್ಯ (27; 12ಎ) ಎಂದಿನಂತೆ ಅಮೋಘ ಬ್ಯಾಟಿಂಗ್ ಮಾಡಿದರು. ತಿಲಕ್ ವರ್ಮಾ (21; 7ಎ, 6X3) ಅವರ ಕಾಣಿಕೆ ತಂಡದ ಮೊತ್ತ ಹೆಚ್ಚಿಸಲು ನೆರವಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>