<p><strong>ಅಹಮದಾಬಾದ್</strong>: ಮುಂಬೈನಲ್ಲಿ ಟಿ20 ವಿಶ್ವಕಪ್ ಸೆಮಿಫೈನಲ್ಗೆ ಎರಡು ದಿನಗಳ ಮುನ್ನ ಚಂದ್ರಗ್ರಹಣ ಇದ್ದ ಕಾರಣ ಭಾರತ ಕ್ರಿಕೆಟ್ ತಂಡವು ನಿಗದಿಯ ವೇಳೆಗಿಂತ ಸುಮಾರು 45 ನಿಮಿಷ ತಡವಾಗಿ ಅಭ್ಯಾಸಕ್ಕೆ ತೆರಳಿತ್ತು.</p>.<p>ಇದೀಗ ಫೈನಲ್ ಪಂದ್ಯವಾಡಲು ಅಹಮದಾಬಾದಿಗೆ ಬಂದಿರುವ ತಂಡವು ಪ್ರತಿ ಬಾರಿ ತಂಗುವ ಹೋಟೆಲ್ ಬದಲಿಸಿದೆ. ಏಕೆಂದರೆ ಈ ಹಿಂದೆ ಎರಡು ಬಾರಿ (2023ರ ಏಕದಿನ ವಿಶ್ವಕಪ್ ಫೈನಲ್ ಮತ್ತು ಪ್ರಸಕ್ತ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8ರ ಹಂತದ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯ) ಆ ಹೋಟೆಲ್ನಲ್ಲಿ ತಂಗಿದ್ದಾಗ ಆಡಿದ್ದ ಮಹತ್ವದ ಪಂದ್ಯಗಳಲ್ಲಿ ಸೋತಿತ್ತು. ಆದ್ದರಿಂದ ಈ ಬಾರಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಡುವ ಮುನ್ನ ಅದೃಷ್ಟದೇವತೆಯನ್ನು ಒಲಿಸಿಕೊಳ್ಳುವ ಪ್ರಯತ್ನವನ್ನು ತಂಡವು ಮಾಡಿದೆ</p>.<p>ತಂಡದಲ್ಲಿರುವ ಪ್ರಮುಖ ನೆರವು ಸಿಬ್ಬಂದಿಯೊಬ್ಬರು ಅಪಾರ ದೈವಭಕ್ತರಾಗಿದ್ದಾರೆ. ತಂಡಕ್ಕೆ ಇಂತಹ ಸಲಹೆಗಳನ್ನು ನೀಡುತ್ತಾರೆಂದು ಹೇಳಲಾಗಿದೆ. ತಂಡಕ್ಕೆ ಬೇಕಾದ ಅನುಕೂಲಗಳನ್ನು ಮಾಡಿಕೊಡುವಲ್ಲಿ ಬಿಸಿಸಿಐ ಕೂಡ ಪೂರ್ಣ ಸಹಕಾರ ನೀಡಿದೆ.</p>.<p><strong>ಕೆಂಪುಮಣ್ಣಿನ ಪಿಚ್?</strong></p><p>ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈಚೆಗೆ ದಕ್ಷಿಣ ಆಫ್ರಿಕಾ ಎದುರು ನಡೆದಿದ್ದ ಪಂದ್ಯದಲ್ಲಿ ಕಪ್ಪುಮಣ್ಣಿನಿಂದ ನಿರ್ಮಿತ ಪಿಚ್ ನೀಡಲಾಗಿತ್ತು. ಆದರೆ ಭಾನುವಾರ ನಡೆಯುವ ಫೈನಲ್ನಲ್ಲಿ ಇಲ್ಲಿರುವ ಕೆಂಪುಮಣ್ಣಿನ ಪಿಚ್ ಆಯ್ಕೆ ಮಾಡಿಕೊಳ್ಳಲು ಭಾರತ ತಂಡ ಚಿತ್ತ ಹರಿಸಬಹುದು ಎನ್ನಲಾಗಿದೆ.</p><p>ಕೆಂಪುಮಣ್ಣಿನ ಪಿಚ್ ಇರುವ ವಾಂಖೆಡೆ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ಸೆಮಿಫೈನಲ್ನಲ್ಲಿ ಭಾರತದ ಬ್ಯಾಟರ್ಗಳು ಅಬ್ಬರಿಸಿದ್ದರು. ಆದ್ದರಿಂದ ಅಹಮದಾಬಾದಿನಲ್ಲಿಯೂ ಕೆಂಪುಮಣ್ಣಿನ ಅಂಗಳದತ್ತ ವಾಲಬಹುದು ಎನ್ನಲಾಗಿದೆ.</p>.<p><strong>ರಿಕಿ ಮಾರ್ಟಿನ್ ಷೋ</strong></p><p>ಪ್ಯೂರ್ಟೊ ರಿಕಾನ್ ಗ್ಯಾಮಿ ಪ್ರಶಸ್ತಿ ವಿಜೇತ ಗಾಯಕ ರಿಕಿ ಮಾರ್ಟಿನ್ ಅವರು ಫೈನಲ್ ಪಂದ್ಯದ ಆರಂಭಕ್ಕೂ ಮುನ್ನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರಿಗಾಗಿ ಆಸನಗಳ ಸಾಮರ್ಥ್ಯ ಇರುವ ಕ್ರೀಡಾಂಗಣ ಇದಾಗಿದೆ.</p><p>‘ದಾಂಡಿಯಾ ಕ್ವೀನ್’ ಫಾಲ್ಗುಣಿ ಪಾಠಕ್ ಮತ್ತು ಬಾಲಿವುಡ್ ಹಿನ್ನೆಲೆ ಗಾಯಕ ಸುಖ್ವಿಂದರ್ ಸಿಂಗ್ ಅವರ ಗಾಯನ ಕಾರ್ಯಕ್ರಮ ಕೂಡ ಆಯೋಜಿಸಲಾಗಿದೆ. ಟಾಸ್ ಹಾಕುವ ಮುನ್ನ ಈ ಕಾರ್ಯಕ್ರಮಗಳು ನಡೆಯಲಿವೆ. </p>.<p><strong>ವಿಶೇಷ ರೈಲು</strong></p><p>ಫೈನಲ್ ಪಂದ್ಯದ ಸಂದರ್ಭದಲ್ಲಿ ಜನರ ಪ್ರಯಾಣಕ್ಕಾಗಿ ಪಶ್ವಿಮ ರೈಲ್ವೆ ವಿಭಾಗವು ಮುಂಬೈನಿಂದ ಅಹಮದಾಬಾದ್ ನಗರಕ್ಕೆ ವಿಶೇಷ ರೈಲು ವ್ಯವಸ್ಥೆ ಮಾಡಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಹಮದಾಬಾದ್</strong>: ಮುಂಬೈನಲ್ಲಿ ಟಿ20 ವಿಶ್ವಕಪ್ ಸೆಮಿಫೈನಲ್ಗೆ ಎರಡು ದಿನಗಳ ಮುನ್ನ ಚಂದ್ರಗ್ರಹಣ ಇದ್ದ ಕಾರಣ ಭಾರತ ಕ್ರಿಕೆಟ್ ತಂಡವು ನಿಗದಿಯ ವೇಳೆಗಿಂತ ಸುಮಾರು 45 ನಿಮಿಷ ತಡವಾಗಿ ಅಭ್ಯಾಸಕ್ಕೆ ತೆರಳಿತ್ತು.</p>.<p>ಇದೀಗ ಫೈನಲ್ ಪಂದ್ಯವಾಡಲು ಅಹಮದಾಬಾದಿಗೆ ಬಂದಿರುವ ತಂಡವು ಪ್ರತಿ ಬಾರಿ ತಂಗುವ ಹೋಟೆಲ್ ಬದಲಿಸಿದೆ. ಏಕೆಂದರೆ ಈ ಹಿಂದೆ ಎರಡು ಬಾರಿ (2023ರ ಏಕದಿನ ವಿಶ್ವಕಪ್ ಫೈನಲ್ ಮತ್ತು ಪ್ರಸಕ್ತ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8ರ ಹಂತದ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯ) ಆ ಹೋಟೆಲ್ನಲ್ಲಿ ತಂಗಿದ್ದಾಗ ಆಡಿದ್ದ ಮಹತ್ವದ ಪಂದ್ಯಗಳಲ್ಲಿ ಸೋತಿತ್ತು. ಆದ್ದರಿಂದ ಈ ಬಾರಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಡುವ ಮುನ್ನ ಅದೃಷ್ಟದೇವತೆಯನ್ನು ಒಲಿಸಿಕೊಳ್ಳುವ ಪ್ರಯತ್ನವನ್ನು ತಂಡವು ಮಾಡಿದೆ</p>.<p>ತಂಡದಲ್ಲಿರುವ ಪ್ರಮುಖ ನೆರವು ಸಿಬ್ಬಂದಿಯೊಬ್ಬರು ಅಪಾರ ದೈವಭಕ್ತರಾಗಿದ್ದಾರೆ. ತಂಡಕ್ಕೆ ಇಂತಹ ಸಲಹೆಗಳನ್ನು ನೀಡುತ್ತಾರೆಂದು ಹೇಳಲಾಗಿದೆ. ತಂಡಕ್ಕೆ ಬೇಕಾದ ಅನುಕೂಲಗಳನ್ನು ಮಾಡಿಕೊಡುವಲ್ಲಿ ಬಿಸಿಸಿಐ ಕೂಡ ಪೂರ್ಣ ಸಹಕಾರ ನೀಡಿದೆ.</p>.<p><strong>ಕೆಂಪುಮಣ್ಣಿನ ಪಿಚ್?</strong></p><p>ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈಚೆಗೆ ದಕ್ಷಿಣ ಆಫ್ರಿಕಾ ಎದುರು ನಡೆದಿದ್ದ ಪಂದ್ಯದಲ್ಲಿ ಕಪ್ಪುಮಣ್ಣಿನಿಂದ ನಿರ್ಮಿತ ಪಿಚ್ ನೀಡಲಾಗಿತ್ತು. ಆದರೆ ಭಾನುವಾರ ನಡೆಯುವ ಫೈನಲ್ನಲ್ಲಿ ಇಲ್ಲಿರುವ ಕೆಂಪುಮಣ್ಣಿನ ಪಿಚ್ ಆಯ್ಕೆ ಮಾಡಿಕೊಳ್ಳಲು ಭಾರತ ತಂಡ ಚಿತ್ತ ಹರಿಸಬಹುದು ಎನ್ನಲಾಗಿದೆ.</p><p>ಕೆಂಪುಮಣ್ಣಿನ ಪಿಚ್ ಇರುವ ವಾಂಖೆಡೆ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ಸೆಮಿಫೈನಲ್ನಲ್ಲಿ ಭಾರತದ ಬ್ಯಾಟರ್ಗಳು ಅಬ್ಬರಿಸಿದ್ದರು. ಆದ್ದರಿಂದ ಅಹಮದಾಬಾದಿನಲ್ಲಿಯೂ ಕೆಂಪುಮಣ್ಣಿನ ಅಂಗಳದತ್ತ ವಾಲಬಹುದು ಎನ್ನಲಾಗಿದೆ.</p>.<p><strong>ರಿಕಿ ಮಾರ್ಟಿನ್ ಷೋ</strong></p><p>ಪ್ಯೂರ್ಟೊ ರಿಕಾನ್ ಗ್ಯಾಮಿ ಪ್ರಶಸ್ತಿ ವಿಜೇತ ಗಾಯಕ ರಿಕಿ ಮಾರ್ಟಿನ್ ಅವರು ಫೈನಲ್ ಪಂದ್ಯದ ಆರಂಭಕ್ಕೂ ಮುನ್ನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರಿಗಾಗಿ ಆಸನಗಳ ಸಾಮರ್ಥ್ಯ ಇರುವ ಕ್ರೀಡಾಂಗಣ ಇದಾಗಿದೆ.</p><p>‘ದಾಂಡಿಯಾ ಕ್ವೀನ್’ ಫಾಲ್ಗುಣಿ ಪಾಠಕ್ ಮತ್ತು ಬಾಲಿವುಡ್ ಹಿನ್ನೆಲೆ ಗಾಯಕ ಸುಖ್ವಿಂದರ್ ಸಿಂಗ್ ಅವರ ಗಾಯನ ಕಾರ್ಯಕ್ರಮ ಕೂಡ ಆಯೋಜಿಸಲಾಗಿದೆ. ಟಾಸ್ ಹಾಕುವ ಮುನ್ನ ಈ ಕಾರ್ಯಕ್ರಮಗಳು ನಡೆಯಲಿವೆ. </p>.<p><strong>ವಿಶೇಷ ರೈಲು</strong></p><p>ಫೈನಲ್ ಪಂದ್ಯದ ಸಂದರ್ಭದಲ್ಲಿ ಜನರ ಪ್ರಯಾಣಕ್ಕಾಗಿ ಪಶ್ವಿಮ ರೈಲ್ವೆ ವಿಭಾಗವು ಮುಂಬೈನಿಂದ ಅಹಮದಾಬಾದ್ ನಗರಕ್ಕೆ ವಿಶೇಷ ರೈಲು ವ್ಯವಸ್ಥೆ ಮಾಡಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>