ರಾಷ್ಟ್ರಪತಿ ಭವನದಲ್ಲಿ ಈ ವರ್ಷ ಇಫ್ತಾರ್ ಕೂಟ ಏರ್ಪಡಿಸದಿರಲು ರಾಷ್ಟ್ರಪತಿ ರಾಮನಾಥ ಕೋವಿಂದ್ ನಿರ್ಧರಿಸಿದ್ದಾರೆ. ಇದು ಬಹಳ ಹಿಂದೆಯೇ ತೆಗೆದುಕೊಳ್ಳಬೇಕಿದ್ದ ಪ್ರಗತಿಪರವಾದ ಒಂದು ಕ್ರಮ. ‘ಇಫ್ತಾರ್’ ಎಂದರೆ ರಂಜಾನ್ ತಿಂಗಳಲ್ಲಿ ಶ್ರದ್ಧಾವಂತ ಮುಸಲ್ಮಾನರು ಸೂರ್ಯೋದಯಕ್ಕಿಂತ ಸ್ವಲ್ಪ ಮುಂಚಿನಿಂದ, ಸೂರ್ಯಾಸ್ತದ ನಂತರ ಸ್ವಲ್ಪ ಹೊತ್ತಿನವರೆಗೆ ನೀರೂ ಕುಡಿಯದೆ, ಸದಾಚಾರ, ಸದಾಲೋಚನೆಯಲ್ಲಿಯೇ ಅಲ್ಲಾಹ್ನ ಆರಾಧನೆಯಲ್ಲಿ ಕಳೆದು, ಸಂಜೆ ಹೊತ್ತಿನಲ್ಲಿ ಈ ‘ರೋಜಾ’ವನ್ನು ಮುಕ್ತಾಯಗೊಳಿಸುವ ಧಾರ್ಮಿಕ ವಿಧಿ. ಒಂದು ಧರ್ಮಕ್ಕೆ ಅನ್ವಯವಾಗುವ ಇಂಥ ಆಚರಣೆಗೆ ಮುಸ್ಲಿಮರಲ್ಲದವರನ್ನೂ ಕರೆದು ಔತಣಕೂಟ ಇಟ್ಟುಕೊಂಡರೆ ಅದು ‘ಇಫ್ತಾರ್’ ಅಲ್ಲ, ಭೋಜನಕೂಟವಾಗುತ್ತದೆ.