ಬುಧವಾರ ರಾತ್ರಿ ಉಗ್ರಾಣ ಕೋಣೆಯಿಂದ ಭತ್ತದ ಚೀಲಗಳನ್ನು ಸಾಗಿಸಲಾಗುತ್ತಿದೆ ಎಂಬ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಸುಕೋ ಬ್ಯಾಂಕ್ ಅಧಿಕಾರಿಗಳು, ಭತ್ತದ ಚೀಲಗಳ ಮೇಲೆ ಸಾಲ ಇದ್ದು ಅವುಗಳನ್ನು ಸಾಗಣೆ ಮಾಡದಂತೆ ನಿಗಮದ ಮಸ್ಕಿಯ ಶಾಖೆಯ ವ್ಯವಸ್ಥಾಪಕರಿಗೆ ಸೂಚಿಸಿದರು. ಅಲ್ಲದೇ, ವ್ಯವಸ್ಥಾಪಕನ ವಿರುದ್ಧ ಸುಕೋ ಬ್ಯಾಂಕ್ನ ಪ್ರಾಂತೀಯ ವ್ಯವಸ್ಥಾಪಕ ಈಶ್ವರನ್ ಪಿ.ಎನ್. ಅವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.