ಬೆಂಗಳೂರು:ಕಲುಷಿತ ನೀರಿನ ಸಂಸ್ಕರಣೆ ಹಾಗೂ ಮರುಬಳಕೆ ಕುರಿತು ಸಾರ್ವಜನಿಕರು ಹಾಗೂ ಉದ್ದಿಮೆದಾರರಿಗೆ ಜಾಗೃತಿ ಮೂಡಿಸುವ ಸಲುವಾಗಿ ವಾಟರ್ ಇಂಡಿಯಾ ಕಂಪನಿ ನಗರದಲ್ಲಿ ವಾಟರ್ ಎಕ್ಸ್ಪೋ–2019 ಪ್ರದರ್ಶನವನ್ನು ಹಮ್ಮಿಕೊಂಡಿದೆ.
ಮಾನ್ಯತಾ ಟೆಕ್ ಪಾರ್ಕ್ ಬಳಿಯ ಮ್ಯಾನ್ಫೋ ಕನ್ವೆನ್ಷನ್ ಸೆಂಟರ್ನಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಗ್ರಾಹಕರೇ ಗುರುವಾರ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನ, ನೀರು ಸಂಸ್ಕರಣೆಯ ಹೊಸ ತಂತ್ರಜ್ಞಾನಗಳ ಬಗೆಗೆ ತಿಳಿದುಕೊಂಡರು. ಪ್ರದರ್ಶನ ಶನಿವಾರದವರೆಗೆ ನಡೆಯಲಿದೆ.