ಫೆ.9ರ ಸಂಜೆ 5ರಿಂದ ‘ಖಂಜರಿ ವ್ಯಾಸ ಮಂಜರಿ’ ವಿಶೇಷ ತಾಳವಾದ್ಯ ಕಛೇರಿ ಇದೆ. ವಿದ್ವಾಂಸರಾದ ಸಿ.ಪಿ.ವ್ಯಾಸವಿಠಲ, ಜಿ.ಗುರುಪ್ರಸನ್ನ ನಡೆಸಿಕೊಡಲಿದ್ದಾರೆ. ಸಂಜೆ 7ರಿಂದ ವಿದ್ವಾನ್ರಾದ ರಾಮನಗರ ಬಿ.ಎಸ್.ನಾರಾಯಣ ಅಯ್ಯಂಗಾರ್, ರುದ್ರಪಟ್ಟಣಂ ಎಸ್.ರಮಾಕಾಂತ್ ಹಾಗೂ ಎಂ.ಭಾಗ್ಯಲಕ್ಷ್ಮಿ ಕೃಷ್ಣ ಅವರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.