ಲಾರಿ ಚಾಲಕರಾದ ಮಹಾರಾಷ್ಟ್ರದ ಶಬೀರ್, ರಾತ್ರಿ 9 ಗಂಟೆ ಸುಮಾರಿಗೆ ‘ಏಷಿಯನ್ ಪೇಯಿಂಟ್ಸ್’ ಕಂಪನಿ ಗೋದಾಮಿಗೆ ಸರಕು ತಂದಿದ್ದರು. ಅದನ್ನು ಅನ್ಲೋಡ್ ಮಾಡುತ್ತಿದ್ದಾಗ ಕಂಪನಿಯ ಇನ್ನೊಂದು ಲಾರಿ ಅಲ್ಲಿಗೆ ಬಂದಿದೆ. ಅದರ ಚಾಲಕ ಲಾರಿಯನ್ನು ಗೋದಾಮಿನ ಪಕ್ಕಕ್ಕೆ ನಿಲ್ಲಿಸುವ ಸಲುವಾಗಿ ಹಿಮ್ಮುಖವಾಗಿ ಚಾಲನೆ ಮಾಡಿದ್ದಾನೆ. ಈ ವೇಳೆ ಶಬೀರ್ ಅವರಿಗೆ ಡಿಕ್ಕಿ ಹೊಡೆದಿದ್ದು, ಕೆಳಗೆ ಬಿದ್ದಾಗ ಚಕ್ರ ಮೈಮೇಲೆ ಹರಿದಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕನನ್ನು ವಶಕ್ಕೆ ಪಡೆದು ಲಾರಿ ಜಪ್ತಿ ಮಾಡಲಾಗಿದೆ ಎಂದು ಕೆ.ಆರ್.ಪುರ ಸಂಚಾರ ಪೊಲೀಸರು ಹೇಳಿದರು.