ಸಾರ್ವಜನಿಕ ಶಿಕ್ಷಣ ಇಲಾಖೆಯ ಮಂಜಣ್ಣ ಉಪನ್ಯಾಸ ನೀಡಿದರು. ‘ಬಸವಣ್ಣನವರು ಮಹಾಮಾನವತಾವಾದಿ. ಜಾತಿ, ಮತ, ಪಂಥಗಳ ಭೇದವಿಲ್ಲದೆ ಎಲ್ಲರು ಸರಿಸಮಾನರು ಎಂದು ಅಪ್ಪಿದವರು.ಅವರ ವಚನಗಳು ಸಮಾಜ ಸುಧಾರಣೆಗೆ ಸಹಕಾರಿ. ಅಂತೆಯೇ ಆದಿ ಗುರು ಶಂಕರಾಚಾರ್ಯರು ತಮ್ಮ ತತ್ವ ಸಿದ್ಧಾಂತಗಳಿಂದ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ’ ಎಂದರು.