ಉಪಮುಖ್ಯಮಂತ್ರಿ ಜಿ ಪರಮೇಶ್ವರ, ‘ನಮ್ಮದು ಬಹಳ ಶ್ರೀಮಂತ ಸಂಸ್ಕೃತಿ ಎಂದು ವಿದೇಶಿಯರಿಗೆ ಹೆಮ್ಮೆಯಿಂದ ಹೇಳುತ್ತೇವೆ. ದಲಿತರ ಮತ್ತು ಸಮುದಾಯದ ಮಹಿಳೆಯರ ಮೇಲಾಗುವ ದೌರ್ಜನ್ಯದ ಸಂಸ್ಕೃತಿಯನ್ನು ಹೇಗೆ ಹೇಳಬೇಕು ಸ್ವಾಮಿ’ ಎಂದು ಬೇಸರ ವ್ಯಕ್ತಪಡಿಸಿದರು.ಹೈಕೋರ್ಟ್ ವಕೀಲ ಉಮಾಶಂಕರ್, ‘ಮತ್ತೆ ಅವರಿಗೆ ಅಧಿಕಾರ ಕೊಟ್ಟರೆ ಸಂವಿಧಾನದ ಮುಖ್ಯವಾದ ಅನುಚ್ಛೇದಗಳನ್ನು ಬದಲಿಸಿ, ಸಂವಿಧಾನವನ್ನೇ ಮಾರ್ಪಾಡುಗೊಳಿಸುತ್ತಾರೆ’ ಎಂದು ಎಚ್ಚರಿಸಿದರು.