‘ಚಂದಾಪುರದ ಆರ್ಟಿಒ ಆಗಿರುವ ಮಂಜುನಾಥ್, ಕಚೇರಿಯಿಂದ ಮನೆಗೆ ಕಾರಿನಲ್ಲಿ ಹೊರಟಿದ್ದರು. ಎಲೆಕ್ಟ್ರಾನಿಕ್ ಸಿಟಿ ಎರಡನೇ ಹಂತದ ರಸ್ತೆಯಲ್ಲಿ ಆಟೊಗೆ ಗುದ್ದಿಸಿದ್ದರು. ಆಟೊ ಉರುಳಿಬಿದ್ದಿತ್ತು. ರಕ್ಷಣೆಗೆ ಬಂದ ಸ್ಥಳೀಯರು ಚಾಲಕ ಇಮ್ರಾನ್ ಅವರನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.