ಜಿಲ್ಲೆಯ ಬ್ಯಾಂಕ್ಗಳ ಒಟ್ಟು ಠೇವಣಿ ಮೊತ್ತ ₹17,516 ಕೋಟಿ ಇದ್ದರೆ, ಮುಂಗಡದ ಮೊತ್ತ ₹10,651 ಕೋಟಿ ಇದೆ. ನಗದು ಮತ್ತು ಠೇವಣಿ ಅನುಪಾತ ಶೇ60.81 ಇದೆ. ಆದರೆ 16 ಬ್ಯಾಂಕ್ಗಳ ನಗದು ಠೇವಣಿ ಅನುಪಾತ ಶೇ60ಕ್ಕಿಂತ ಕಡಿಮೆ ಇದೆ. ಆದ್ಯತಾ ವಲಯಕ್ಕೆ ₹3,335 ಕೋಟಿ ಸಾಲ ನೀಡುವ ಗುರಿ ಹೊಂದಲಾಗಿತ್ತು, ಆದರೆ ಸೆಪ್ಟೆಂಬರ್ ವರೆಗೆ ₹1,352 ಕೋಟಿ ಸಾಲ ನೀಡಲಾಗಿದೆ. ಅಂದರೆ ಶೇ40.56ರಷ್ಟು ಮಾತ್ರ ಸಾಧನೆಯಾಗಿದೆ ಎಂದರು.