‘2018ರ ಆಗಸ್ಟ್ನಲ್ಲಿ ಮನೆ ಖಾಲಿ ಮಾಡುವಂತೆ ಆದಿತ್ಯ ಅವರಿಗೆ ವಕೀಲರ ಮೂಲಕ ಮಾಲೀಕರು ನೋಟಿಸ್ ನೀಡಿದ್ದರು. ಒಂದು ತಿಂಗಳ ಕಾಲಾವಕಾಶ ಕೋರಿದ್ದ ನಟ, ಅದಾದ ನಂತರವೂ ಮನೆ ಖಾಲಿ ಮಾಡಿರಲಿಲ್ಲ. ಇದುವರೆಗೂ ಅವರು ₹ 2.98 ಲಕ್ಷ ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಅದರಿಂದ ನೊಂದ ಪ್ರಸನ್ನ, ನಗರದ ಪ್ರಧಾನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಆದಿತ್ಯ ವಿರುದ್ಧ 2018ರಲ್ಲೇ ಮೊಕದ್ದಮೆ ಹೂಡಿದ್ದಾರೆ’ ಎಂದು ಪೊಲೀಸರು ಹೇಳಿದರು.