ಬೆಂಗಳೂರು: ಚಿತ್ರನಟ ಯಶ್ ಕುಟುಂಬ ವಾಸವಿರುವ ಕತ್ರಿಗುಪ್ಪೆ ಮನೆಯ ಬಾಡಿಗೆ ಬಾಕಿ, ₹ 25 ಲಕ್ಷ ಮೊತ್ತವನ್ನು ಮನೆಯ ಮಾಲೀಕ ಡಾ.ಎಂ. ಮುನಿಪ್ರಸಾದ್ ಅವರಿಗೆ ಬಿಡುಗಡೆ ಮಾಡುವಂತೆ ರಿಜಿಸ್ಟ್ರಾರ್ ಜನರಲ್ ಅವರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಈ ಕುರಿತಂತೆ ಮುನಿಪ್ರಸಾದ್ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹಾಗೂ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ‘ಹಣವನ್ನು ಮನೆ ಮಾಲೀಕರಿಗೆ ಬಿಡುಗಡೆ ಮಾಡಿ’ ಎಂದು ಆದೇಶಿಸಿ ಅರ್ಜಿ ವಿಲೇವಾರಿ ಮಾಡಿತು.
ಹೈಕೋರ್ಟ್ ಆದೇಶದಂತೆ ₹ 25 ಲಕ್ಷ ಮೊತ್ತವನ್ನು ಯಶ್ ತಾಯಿ ಪುಷ್ಪಾ ರಿಜಿಸ್ಟ್ರಾರ್ ಅವರಲ್ಲಿ ಠೇವಣಿ ಇರಿಸಿದ್ದರು. ಈ ಹಣವನ್ನು ಬಿಡುಗಡೆ ಮಾಡುವಂತೆ ಕೋರಿ ಮುನಿಪ್ರಸಾದ್ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.