‘ಸಣ್ಣ ಕಾರ್ಯಕ್ರಮವಾದರೂ ಅಗ್ನಿ ಅವಘಡ ತಡೆಗೆ ಸುರಕ್ಷಿತ ವ್ಯವಸ್ಥೆ ಮಾಡಲಾಗುತ್ತದೆ. ಆದರೆ, ವೈಮಾನಿಕ ಪ್ರದರ್ಶನದ ವೇಳೆ ಅಂಥ ವ್ಯವಸ್ಥೆ ಇರಲಿಲ್ಲ. ಇದು ಪೊಲೀಸ್ ವೈಫಲ್ಯ. ವಾಹನ ನಿಲುಗಡೆಗೆ ಸ್ಥಳವನ್ನು ನಿಗದಿಪಡಿಸುವ ಜವಾಬ್ದಾರಿಯನ್ನು ಸಂಚಾರಿ ಪೊಲೀಸರು ವಹಿಸಲಿಲ್ಲ. ಅಗ್ನಿಶಾಮಕ ದಳದ ಅಧಿಕಾರಿಗಳು ಈ ಸ್ಥಳವನ್ನು ಪರಿಶೀಲಿಸಿ ನಿರಕ್ಷೇಪಣಾ ಪತ್ರ (ಎನ್ಒಸಿ) ನೀಡಬೇಕಿತ್ತು. ರಾಜ್ಯ ಸರ್ಕಾರ ಸೂಕ್ತ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದರೆ ಈ ಅನಾಹುತ ತಪ್ಪಿಸಬಹುದಿತ್ತು’ ಎಂದು ಅವರು ಪ್ರತಿಪಾದಿಸಿದರು.