‘ಭಾರತೀಯ ಭ್ರಷ್ಟಾಚಾರ ನಿಗ್ರಹ ಮಂಡಳಿಯ ಬೆಂಬಲಿಗ ಕೆ.ಕೆ.ಸಿಂಗ್ ಅವರು, ಈ ಬಗ್ಗೆ ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಬಿಜೆಪಿಯಿಂದಲೂ ದೂರು ನೀಡಲಾಗುವುದು’ ಎಂದು ಶೆಟ್ಟರ್ ತಿಳಿಸಿದರು.‘ಸರ್ಕಾರಿ ಸಂಸ್ಥೆಯಾಗಿರುವ ಎಂಎಸ್ಐಎಲ್ಗೆ ಸ್ಟೌ ವಿತರಣೆಯ ಜವಾಬ್ದಾರಿ ನೀಡಲಾಗಿದೆ. ಅದು ಟೆಂಡರ್ ಕರೆದಿತ್ತು. ಒಂದೇ ಸಮೂಹಕ್ಕೆ ಸೇರಿದ್ದು ಎನ್ನಲಾದ ನಾಲ್ಕು ಕಂಪನಿಗಳು ಅರ್ಜಿ ಸಲ್ಲಿಸಿದ್ದವು. ಈ ಪೈಕಿ, ಗ್ರೀನ್ಶೆಫ್ ಅಪ್ಲೈಯನ್ಸಸ್ ಲಿಮಿಟೆಡ್ನ ಸುಖಲಾಲ್ ಜೈನ್, ಸ್ಟೌಕ್ರಾಫ್ಟ್ ಪ್ರೈವೇಟ್ ಲಿಮಿಟೆಡ್ನ ಎಸ್.ಎನ್. ಪ್ರವೀಣ್ ಎಂಬುವರಿಗೆ ಸ್ಟೌ ವಿತರಣೆ ಮಾಡಲು ಆದೇಶ ನೀಡಲಾಗಿದೆ’ ಎಂದರು.‘ಸ್ಟೌಗಳನ್ನಿಟ್ಟಿರುವ ಗೋದಾಮುಗಳನ್ನು ಜಪ್ತಿ ಮಾಡಬೇಕು. ಕಾಂಗ್ರೆಸ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಶೆಟ್ಟರ್ ಆಯೋಗವನ್ನು ಒತ್ತಾಯಿಸಿದರು.