‘ಫರೀದ್ ಜಾಮೀನು ಪಡೆಯಲು ಅಲೋಕ್ ಅವರೇ ಸಹಾಯ ಮಾಡಿದ್ದರು. ಹೀಗಾಗಿ ಸಿಸಿಬಿಯಿಂದ ನ್ಯಾಯ ಸಿಗುವ ಲಕ್ಷಣಗಳು ಕಾಣುತ್ತಿಲ್ಲ’ ಎಂದು ಅವರು ಹೇಳಿದರು. ‘ದುಬೈ, ಬೆಂಗಳೂರು, ಬಳ್ಳಾರಿ ಮತ್ತು ಮೈಸೂರಿನಲ್ಲಿ ಕಚೇರಿಗಳಿವೆ. ಪೊಲೀಸರು ಬೆಂಗಳೂರಲ್ಲಿ ಮಾತ್ರ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಆರೋಪಿಯ ಆಸ್ತಿ ಜಪ್ತಿಗೂ ಪ್ರಯತ್ನಿಸುತ್ತಿಲ್ಲ. ಬದಲಾಗಿ ಆತನೊಂದಿಗೆ ಊಟ ಮಾಡಲು ಅಲೋಕ್ ಐಷಾರಾಮಿ ಹೋಟೆಲ್ಗೆ ಹೋಗುತ್ತಾರೆ’ ಎಂದು ದೂರಿದರು.