ಧಾರವಾಡ: ಸಂಗೀತ ಅಕಾಡೆಮಿ ಸದಸ್ಯ, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ, ನಾಟಕಕಾರ ಅನಿಲ ದೇಸಾಯಿ (57) ಸೋಮವಾರ ಮುಂಜಾನೆ ಹೃದಯಾಘಾತ ದಿಂದ ನಿಧನರಾದರು.
ಭಾನುವಾರ ತಡರಾತ್ರಿವರೆಗೆ ಚಟುವಟಿಕೆಯಿಂದಲೇ ಇದ್ದ ಅನಿಲ ದೇಸಾಯಿ ಮಲಗಿದ್ದಲ್ಲಿಯೇ ಇಹಲೋಕದ ಯಾತ್ರೆ ಮುಗಿಸಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.
ರಂಗಭೂಮಿಯಲ್ಲೂ ಅತ್ಯಂತ ಕ್ರಿಯಾಶೀಲರಾಗಿದ್ದ ಅವರು ಧಾರವಾಡದ ಸಾಂಸ್ಕೃತಿಕ ಬದುಕಿನ ಭಾಗವಾಗಿದ್ದರು. ನಟ, ನಿರ್ದೇಶಕರಾಗಿ ಆಕಾಶವಾಣಿ ನಾಟಕಗಳಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದರು.
ಸಾಹಿತ್ಯಿಕ ಕೃತಿಗಳನ್ನು ಸಂಪಾದಿಸಿದ್ದರು. ಮೃತರ ಅಂತ್ಯಕ್ರಿಯೆ ಸಂಜೆ ಇಲ್ಲಿ ನಡೆಯಿತು.