‘ಕುಮಾರಪಾರ್ಕ್ ವೆಸ್ಟ್ನಲ್ಲಿ ‘ಕುಮಾರ್ ಎಂಟರ್ ಪ್ರೈಸಸ್’ ಹೆಸರಿನ ಕಚೇರಿ ನಡೆಸುತ್ತಿರುವ ಆರ್.ಶಿವಕುಮಾರ್ ಹಾಗೂ ಎಸ್.ರಂಜಿತಾ ಎಂಬುವರು ನನ್ನಿಂದ ₹15.55 ಕೋಟಿ ಪಡೆದುಕೊಂಡಿದ್ದರು. ಹಣ ವಾಪಸ್ ಕೇಳಿದ್ದಕ್ಕೆ ಸುಫಾರಿ ಕೊಟ್ಟು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಅನಿಲ್ ಲಾಡ್ ದೂರು ನೀಡಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ರವಿ ಪೂಜಾರಿ ಹೆಸರಿನಲ್ಲಿ ಲಾಡ್ಗೆ ಕರೆ ಮಾಡಿದ್ದ ಅಪರಿಚಿತ, ‘ಪದೇ ಪದೇ ಹಣ ಕೇಳಿದರೆ ನಿನ್ನನ್ನು ಕೊಲೆ ಮಾಡುತ್ತೇನೆ’ ಎಂಬುದಾಗಿ ಬೆದರಿಸಿದ್ದ’ ಎಂದು ಪೊಲೀಸರು ಹೇಳಿದರು.