ಅಮರ್ ಅಲಿ ಸಲಾಂ ಹಾಗೂಹುಸೇನ್ ಸಲಾಂ ಮೊಹಮ್ಮದ್ ಬಂಧಿತರು. ‘ಪಾನಮತ್ತರಾಗಿದ್ದ ಆರೋಪಿಗಳು ಹಾಗೂ ಅವರ ಸ್ನೇಹಿತರು, ರಸ್ತೆಯಲ್ಲಿ ಗುಂಪು ಸೇರಿ ಕಿರುಚಾಡುತ್ತಿದ್ದರು. ದಾರಿಹೋಕರ ಜೊತೆ ಜಗಳ ತೆಗೆಯುತ್ತ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದರು. ಆ ಬಗ್ಗೆ ಸ್ಥಳೀಯರು ನೀಡಿದ್ದ ಮಾಹಿತಿಯಂತೆ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದರು’ ಎಂದು ಅಶೋಕನಗರ ಪೊಲೀಸರು ಹೇಳಿದರು. ‘ಸಿಬ್ಬಂದಿ ಜೊತೆಯೇ ಆರೋಪಿಗಳು ಜಗಳ ತೆಗೆದಿದ್ದರು. ಸಮವಸ್ತ್ರ ಹಿಡಿದು ಎಳೆದಾಡಿದ್ದರು ಎಂದರು.