ಪ್ರಕರಣವೇನು?: ‘ನಾಗರಾಜು, ಅವರು ಪುತ್ರರೂ ಸೇರಿದಂತೆ 13 ಜನರು ನನ್ನ ಮನೆಯನ್ನು ಅತಿಕ್ರಮವಾಗಿ ಪ್ರವೇಶಿಸಿ, ನನ್ನ ಮೇಲೆ ಮತ್ತು ನನ್ನ ತಾಯಿ ಚಾಮುಂಡೇಶ್ವರಿ ಮೇಲೆ ಮಚ್ಚು, ಲಾಂಗು ಮತ್ತು ಸುತ್ತಿಗೆಯಿಂದ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ’ ಎಂದು ಶ್ವೇತಾ ಎಂಬುವರು 2018ರ ನವೆಂಬರ್ 11ರಂದು ಶ್ರೀರಾಂಪುರ ಪೊಲೀಸರಿಗೆ ದೂರು ನೀಡಿದ್ದರು.