ಬೆಂಗಳೂರಿನ ಎಂ.ಸಿ. ಕುಮಾರ್ ಹಾಗೂ ಇತರ ಮೂವರು ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಬಂದಿದ್ದರು. ವಿಮಾನ ನಿಲ್ದಾಣದ ಮುಂಭಾಗದಿಂದ ದುರ್ಗದ ಬೈಲ್ಗೆ ಪ್ರಯಾಣಿಸಲು ಅವರು ಆಟೊ ಹತ್ತಿದ್ದರು. ಇಳಿಯುವಾಗ ಬ್ಯಾಗ್ ಬಿಟ್ಟು ಹೋಗಿದ್ದಾರೆ. ಇದನ್ನು ಗಮನಿಸಿದ ಶಬ್ಬೀರ್ ಅವರು ಬ್ಯಾಗ್ ಪೊಲೀಸ್ ಠಾಣೆಗೆ ತಂದು ನೀಡಿದರು. ಅದನ್ನು ಮಾಲೀಕರಿಗೆ ಒಪ್ಪಿಸಲಾಗಿದೆ ಎಂದು ಇನ್ಸ್ಪೆಕ್ಟರ್ ಡಿ.ಪಿ. ನಿಂಬಾಳಕ್ ತಿಳಿಸಿದ್ದಾರೆ.