ಬೆಂಗಳೂರು: ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ ನ.15ರಂದು ಆಡುಗೋಡಿಯ ಪಟೇಲ್ ಮುನಿಚಿನ್ನಪ್ಪ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಆವರಣದಲ್ಲಿ ಒಂದು ದಿನದ ಮಕ್ಕಳ ಸಾಹಿತ್ಯೋತ್ಸವವನ್ನು ಆಯೋಜಿಸಿದೆ.
ಮಕ್ಕಳ ಬರವಣಿಗೆಯನ್ನು ವಿಕಸನಗೊಳಿಸುವುದು ಸಾಹಿತ್ಯೋತ್ಸವದ ಮುಖ್ಯ ವಿಷಯ. ಮಕ್ಕಳ ಸಾಹಿತಿಗಳು ಹಾಗೂ ಚಿತ್ರ ಕಲಾವಿದರೊಂದಿಗೆ ಮಕ್ಕಳ ಸಂವಾದಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿಜ್ಞಾನದ ಬರಹಗಾರ ನಾಗೇಶ ಹೆಗಡೆ ಸಾಹಿತ್ಯೋತ್ಸವವನ್ನು ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.