ಬಹಿರಂಗ ವಿಚಾರಣೆಯಲ್ಲಿ ಮೀಸಲಾತಿ ಪಟ್ಟಿಗೆ ಸೇರ್ಪಡೆಯಾಗುವ ಕುರಿತು, ಪಟ್ಟಿಯಲ್ಲಿದ್ದರೂ ಜಾತಿಗಳ ಪರ್ಯಾಯ ಪದಗಳು ಸೇರದಿರುವುದು, ಮೀಸಲಾತಿ ಪಟ್ಟಿಯಲ್ಲಿ ತಪ್ಪಾಗಿ ಹೆಸರು ಮುದ್ರಿತವಾಗಿರುವುದು ಇತ್ಯಾದಿ ಕುರಿತು ಅಹವಾಲು ಸಲ್ಲಿಕೆಯಾಗಿವೆ. ಈ ಸಂಬಂಧ ಆಯೋಗವು 120 ಸಲಹೆಗಳನ್ನು ವರದಿ ರೂಪದಲ್ಲಿ ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ ಎಂದು ಕಾಂತರಾಜ ಮಾಹಿತಿ ನೀಡಿದರು.