ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದ ಗೋಪಾಲಸ್ವಾಮಿ ಬೆಟ್ಟದ ವಲಯದಲ್ಲಿ ಮಂಗಳವಾರ ಮಳೆಯಾಗಿ ಭೂಮಿಗೆ ತಂಪೆರೆದಿದೆ.
ಗೋಪಾಲಸ್ವಾಮಿ ಬೆಟ್ಟ ವಲಯ, ಕುಂದುಕೆರೆ ವಲಯ, ಮದ್ದೂರು ವಲಯಗಳಲ್ಲಿ 20 ನಿಮಿಷ ಮಳೆಯಾಗಿದೆ. ಸೋಮವಾರವೂ ಈ ಭಾಗದಲ್ಲಿ ಉತ್ತಮ ಮಳೆಯಾಗಿತ್ತು. ಬೆಂಕಿ ಬಿದ್ದು ಬೂದಿಮಯವಾಗಿದ್ದ ಅರಣ್ಯ ಪ್ರದೇಶದಲ್ಲಿ ಎರಡು ದಿನಗಳಿಂದ ಮಳೆಯಾಗುತ್ತಿದೆ.