‘ನಿವೃತ್ತಿ ಹೊಂದುತ್ತಿರುವ ನಾಗರಾಜಯ್ಯ ಅವರನ್ನು ಮರುನೇಮಕ ಮಾಡುವ ಕುರಿತು ಜನವರಿ ತಿಂಗಳ ಕೊನೆಯಲ್ಲಿ ನಡೆದ ಆಡಳಿತ ಮಂಡಳಿಯ ಸಭಾ ನಡಾವಳಿಯಲ್ಲಿ ದಾಖಲಿಸಲಾಗಿದೆ. ಆದರೆ, ಸಭೆಯ ಕಾರ್ಯಸೂಚಿಯಲ್ಲೇ ಈ ವಿಷಯ ಇರಲಿಲ್ಲ. ಅಲ್ಲದೆ, ಸಭೆಯಲ್ಲೂ ಚರ್ಚಿಸಿಲ್ಲ’ ಎಂದು ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.