ಪಂಜಾಬ್ನ ಕಲ್ಯಾಣಪುರದ ಸುರೇಂದ್ರಪಾಲ್ ಹಾಗೂ ಅವರ ಸ್ನೇಹಿತರು, ಉದ್ಯೋಗ ಅರಸಿ ಕೆನಡಾಗೆ ಹೋಗಲು ಸಿದ್ಧತೆ ನಡೆಸಿದ್ದರು. ಈ ವಿಚಾರ ತಿಳಿದು ಅವರನ್ನು ಸಂಪರ್ಕಿಸಿದ್ದ ಟ್ರಾವೆಲ್ ಏಜೆಂಟರು, ‘ಯಾವುದೇ ದಾಖಲೆ ಇಲ್ಲದೇ ನಿಮ್ಮನ್ನು ಕೆನಡಾಗೆ ಕರೆದುಕೊಂಡು ಹೋಗುತ್ತೇವೆ. ನಮ್ಮ ಮೇಲೆ ಅನುಮಾನವಿದ್ದರೆ, ಕೆನಡಾ ತಲುಪಿದ ನಂತರವೇ ತಲಾ ₹20 ಲಕ್ಷ ಕೊಡಿ’ ಎಂದು ಹೇಳಿದ್ದರು ಎಂಬುದಾಗಿ ಸಿಐಡಿ ಮೂಲಗಳು ತಿಳಿಸಿವೆ.